Home Mangalorean News Kannada News ಜಿಂಕೆ ಕೊಂಬು ಸಾಗಿಸುತ್ತಿದ್ದ ಐವರ ಬಂಧನ

ಜಿಂಕೆ ಕೊಂಬು ಸಾಗಿಸುತ್ತಿದ್ದ ಐವರ ಬಂಧನ

Spread the love

ಜಿಂಕೆ ಕೊಂಬು ಸಾಗಿಸುತ್ತಿದ್ದ ಐವರ ಬಂಧನ

ಕುಂದಾಪುರ : ಓಮಿನಿ ಕಾರಿನಲ್ಲಿ ಸುಮಾರು 21 ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ಐವರನ್ನು ಕುಂದಾಪುರ ಅರಣ್ಯಾಧಿಕಾರಿಗಳ ತಂಡ ಕೋಟೇಶ್ವರದ ಬೈಪಾಸ್ ಬಳಿ ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಹೆಂಗವಳ್ಳಿಯ ರವಿ (35) ಕುಂದಾಪುರದ ದಿನೇಶ್ ಗಾಣಿಗ (54), ಅಲ್ಪಾಡಿಯ ದೀಪಕ್ (32), ಉದಯ ನಾಯ್ಕ (34), ರವಿಚಂದ್ರ ಶೆಟ್ಟಿ (32) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಲಕ್ಷಾಂತರ ಮೌಲ್ಯದ 21 ಜಿಂಕೆ ಕೊಂಬುಗಳೊಂದಿಗೆ ಸಾಗಾಟಕ್ಕೆ ಬಳಸಿದ ಓಮಿನಿ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಕುಂದಾಪುರ ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್ ನೇತೃತ್ವದಲ್ಲಿ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಹಾಗೂ ಸಿಬಂದಿಯಿಂದ ಈ ಕಾರ್ಯಾಚರಣೆ ನಡೆದಿದೆ.


Spread the love

Exit mobile version