Home Mangalorean News Kannada News ಜುಗಾರಿ ಅಡ್ಡೆಗೆ ದಾಳಿ – 15 ಮಂದಿಯ ಬಂಧನ

ಜುಗಾರಿ ಅಡ್ಡೆಗೆ ದಾಳಿ – 15 ಮಂದಿಯ ಬಂಧನ

Spread the love

ಜುಗಾರಿ ಅಡ್ಡೆಗೆ ದಾಳಿ – 15 ಮಂದಿಯ ಬಂಧನ

ಬಂಟ್ವಾಳ: ಹೊಳೆ ಬದಿಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ 15 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಮೀತ್ ಶೆಟ್ಟಿ, ರಾಮಚಂದ್ರ, ಸಂತೋಷ್ ಕುಮಾರ್, ಧೀರಜ್, ಸುಜಯ್, ನಜೀರ್, ಮೊಹಮದ್ ಮುಸ್ತಾಫಾ, ಕಿಶೋರ್, ಮಹಮದ್ ಷರೀಫ್, ನಿತ್ಯಾನಂದ, ರಮೇಶ್, ನಾಗೇಶ್, ರೋಷನ್ ವೇಗಸ್, ಹೇಮಚಂದ್ರ, ಚೇತನ್ ಎಂದು ಗುರುತಿಸಲಾಗಿದೆ.

ಮೇ 30ರಂದು ಬಂಟ್ವಾಳ ಗ್ರಾಮಾಂತರ ಪಿ ಎಸ್ ಐ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತುಂಬೆ ಗ್ರಾಮದ ಹೊಳೆ ಬದಿಯಲ್ಲಿ ಆಡುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿ ಸುಮಾರು 15 ಜನರನ್ನು ವಶಕ್ಕೆ ಪಡೆದಿರುತ್ತಾರೆ.
ದಾಳಿಯಲ್ಲಿ ಒಟ್ಟು 38000/-ರೂ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಟಾರ್ಪಲ್, ಚಾರ್ಜ್ ಬ್ಯಾಟರಿ ಮತ್ತು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ.ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಯಲ್ಲಿರುತ್ತದೆ.


Spread the love

Exit mobile version