Home Mangalorean News Kannada News ಟಾರ್ಗೆಟ್ ಗ್ರೂಪ್ ಇಲ್ಯಾಸ್ ಹತ್ಯೆ ಪ್ರಕರಣ ಮತ್ತೆ ಮೂವರ ಬಂಧನ

ಟಾರ್ಗೆಟ್ ಗ್ರೂಪ್ ಇಲ್ಯಾಸ್ ಹತ್ಯೆ ಪ್ರಕರಣ ಮತ್ತೆ ಮೂವರ ಬಂಧನ

Spread the love

ಟಾರ್ಗೆಟ್ ಗ್ರೂಪ್ ಇಲ್ಯಾಸ್ ಹತ್ಯೆ ಪ್ರಕರಣ ಮತ್ತೆ ಮೂವರ ಬಂಧನ

ಮಂಗಳೂರು: ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಪಾಂಡೇಶ್ವರ ಠಾಣೆಯ ಪೋಲಿಸರು ಗುರುವಾರ ಬಂಧಿಸಿದ್ದಾರೆ

ಬಂಧೀತರನ್ನು ಉಳ್ಳಾಲ ಬೊಟ್ಟು ಧರ್ಮನಗರದ ದಾವೂದ್ (38), ಮಂಜೇಶ್ವರ ಉದ್ಯಾವರ ನಿವಾಸಿ ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ನಾಚಿ (25), ಮಂಜೇಶ್ವರದ ಮಚ್ಚಂಪಾಡಿಯ ರಿಯಾಝ್ ಎ ಯಾನೆ ರಿಯಾ ಯಾನೆ ಇಯ್ಯಾ (32) ಎಂದು ಗುರುತಿಸಲಾಗಿದೆ.

ಆರೋಪಿ ದಾವೂದ್ ಈ ಪ್ರಕರಣದ ಕೃತ್ಯದಲ್ಲಿ ನೇರಭಾಗಿಯಾಗಿರುತ್ತಾನೆ ಆರೋಪಿ ಮಹಮ್ಮದ್ ನಾಸಿರ್ ಹಾಗೂ ರಿಯಾಜ್ ಎ @ ರಿಯಾ @ಇಯ್ಯಾ ರವರು ಕೊಲೆ ನಡೆಸಿದ ಆರೋಪಿಗಳಿಗೆ ಆಶ್ರಯ ಹಾಗೂ ಹಣಕಾಸು ನೀಡಿ ಸಹಕರಿಸಿರುತ್ತಾರೆ. ಆರೋಪಿ ದಾವೂದ್ ನ ಮೇಲೆ ಇಲ್ಯಾಸ್ ಕೊಲೆ ಪ್ರಕರಣ ಸೇರಿ ಒಟ್ಟು ನಾಲ್ಕು ಕೊಲೆ, ಎರಡು ಕೊಲೆ ಯತ್ನ ಹಾಗೂ ಇತರ ಐದು ಪ್ರಕರಣಗಳು ದಾಖಲಾಗಿರುತ್ತದೆ. ಮಹಮ್ಮದ್ ನಾಸಿರ್ ಎಂಬಾತನ ಮೇಲೆ ಮಂಜೇಶ್ವರ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ಮಹಮ್ಮದ್ ಸಮೀರ್ @ ಸಮೀರ್ ಮತ್ತು ನಮೀರ್ ಹಂಝ ರವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನಲ್ಲಿರುತ್ತಾರೆ.


Spread the love

Exit mobile version