Home Mangalorean News Kannada News ತಣ್ಣೀರು ಬಾವಿ ಶಿವರಾಜ್ ಕೊಲೆ ; ಮೂವರು ಆರೋಪಿಗಳ ಬಂಧನ

ತಣ್ಣೀರು ಬಾವಿ ಶಿವರಾಜ್ ಕೊಲೆ ; ಮೂವರು ಆರೋಪಿಗಳ ಬಂಧನ

Spread the love

ತಣ್ಣೀರು ಬಾವಿ ಶಿವರಾಜ್ ಕೊಲೆ ; ಮೂವರು ಆರೋಪಿಗಳ ಬಂಧನ

ಮಂಗಳೂರು: ಪಣಂಬೂರು ಪೋಲಿಸ್ ಠಾಣ ವ್ಯಾಪ್ತಿಯ ಬೆಂಗ್ರೆ ಶಿವರಾಜ್ (39) ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ತಣ್ಣೀರು ಬಾವಿ ನಿವಾಸಿ ಗಳಾದ ಸುನಿಲ್ ಪೂಜಾರಿ (32), ಧೀರಜ್ (25), ಮಲ್ಲೇಶ ಯಾನೆ ಮಾದೇಶ (23) ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಿಗ್ಗಿನ ಜಾವಾ 4.30 ಗಂಟೆಗೆ ಮನೆಯ ಟೇರೆಸಿನಲ್ಲಿ ಮಲಗಿದ್ದ ಶಿವರಾಜ್ ಅವರನ್ನು ಆರೋಪಿಗಳು ಮಾರಕಾಯುಧಗಳೊಂದಿಗೆ ಬಂದು ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಶಿವರಾಜನನ್ನು ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಮೃತಪಟ್ಟಿದ್ದರು. ಈ ಕುರಿತು ಪಣಂಬೂರು ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಹಳೆಯ ವೈಯುಕ್ತಿಕ ದ್ವೇಷಕ್ಕಾಗಿ ಕೊಲೆ ಕೃತ್ಯ ನಡೆಸಿದ್ದು, ಕೊಲೆ ಕೃತ್ಯದಲ್ಲಿ ಇನ್ನೂ ಇತರರು ಭಾಗಿಯಾಗಿದ್ದು, ಇವರ ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು ವಿಸ್ತ್ರತ ತನಿಖೆ ಮುಂದುವರೆದಿದೆ.

ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತರಾಮ್, ಪಿಎಸ್ ಐ ಶ್ಯಾಮ್ ಸುಂದರ್, ಎಎಸ್ ಐ ಶಶಿಧರ ಶೆಟ್ಟಿ ಹಾಗೂ ಸಿಬಂದಿಯರವರಾದ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗಿಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ ಪ್ರಶಾಂತ್ ಶೆಟ್ಟಿ, ಅಶಿತ್ ಡಿಸೋಜಾ, ತೇಜಕುಮಾರ್ ಹಾಗೂ ರಿತೇಶ್ ಅವರು ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Exit mobile version