Home Mangalorean News Kannada News ತೆಂಕನಿಡಿಯೂರು ಹೈಸ್ಕೂಲ್ ಸುವರ್ಣ ಸಂಭ್ರಮ: ಆವರಣ ಗೋಡೆಗೆ ಗುದ್ದಲಿಪೂಜೆ

ತೆಂಕನಿಡಿಯೂರು ಹೈಸ್ಕೂಲ್ ಸುವರ್ಣ ಸಂಭ್ರಮ: ಆವರಣ ಗೋಡೆಗೆ ಗುದ್ದಲಿಪೂಜೆ

Spread the love

ತೆಂಕನಿಡಿಯೂರು ಹೈಸ್ಕೂಲ್ ಸುವರ್ಣ ಸಂಭ್ರಮ: ಆವರಣ ಗೋಡೆಗೆ ಗುದ್ದಲಿಪೂಜೆ

ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆ ಸುವರ್ಣ ಮಹೋತ್ಸವ ಹಾಗೂ ಪದವಿಪೂರ್ವ ಕಾಲೇಜು ದಶಮಾನೋತ್ಸವದ ಅಂಗವಾಗಿ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಲಾ ಆವರಣಗೊಡೆಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಮತ್ತು ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಎ ಗಫೂರ್, ದಿನೇಶ್ ಪುತ್ರನ್ ಉಡುಪಿ ಜಿಲ್ಲಾ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್ ಅಧ್ಯಕ್ಷ ನಾಗೇಶ್ ಹೆಗ್ಡೆ, ತಾಪಂ ಸದಸ್ಯ ಧನಂಜಯ ಕುಂದರ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ|ಬಾಲಕೃ, ಕಷ್ಣ ಹೆಗ್ಡೆ, ಪದವಿ ಪೂರ್ವ ಶಿಕ್ಷಣ ಇಲಾಖೇಯ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್, ತಾಲೂಕು ದೈಹಿಕ ಪರಿವೀಕ್ಷಕ ಭುಜಂಗ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಸತೀಶ್ ನಾಯ್ಕ್, ದಯಾನಂದ ಶೆಟ್ಟಿ ಕೊಜಕುಳಿ, ಮುಖ್ಯೋಪಾಧ್ಯಾಯ ಜಯಪ್ರಕಾಶ್ ನಾಯಕ್, ಕಲ್ಪನಾ, ಪ್ರಮೀಳಾ, ಪ್ರಥ್ವಿರಾಜ್ ಶೆಟ್ಟಿ, ವಿಠಲ್ ಶೆಟ್ಟಿ, ಭವಾನಿ ಶಂಕರ್, ಸತೀಶ್ ಶೆಟ್ಟಿ ಧಾರವಾಡ ಉಪಸ್ಥಿತರಿದ್ದರು.

ಪ್ರಾಂಶುಪಾಲ ಸಿದ್ದೇಶ್ವರ್ ಸ್ವಾಗತಿಸಿ, ಸತೀಶ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ಪಾಲನ್ ವಂದಿಸಿದರು.


Spread the love

Exit mobile version