Home Mangalorean News Kannada News ತೊಕ್ಕೊಟ್ಟು ಬಳಿ ಮಾಂಸದ ಅಂಗಡಿಯ ಮ್ಹಾಲಿಕನ ಕೊಲೆಗೆ ಯತ್ನ

ತೊಕ್ಕೊಟ್ಟು ಬಳಿ ಮಾಂಸದ ಅಂಗಡಿಯ ಮ್ಹಾಲಿಕನ ಕೊಲೆಗೆ ಯತ್ನ

Spread the love

ತೊಕ್ಕೊಟ್ಟು ಬಳಿ ಮಾಂಸದ ಅಂಗಡಿಯ ಮ್ಹಾಲಿಕನ ಕೊಲೆಗೆ ಯತ್ನ

ಮಂಗಳೂರು: ಮಾಂಸದ ಅಂಗಡಿಯ ಮ್ಹಾಲಿಕನೋರ್ವನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಮಾಂಸದ ಅಂಗಡಿಯ ಮ್ಹಾಲಿಕ ಹಳೆಕೋಟೆ ನಿವಾಸಿಯಾಗಿರುವ ನಝೀರ್(47) ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕಿನಲ್ಲಿ ಬಂದ ಇಬ್ಬರು ತಲವಾರಿನಿಂದ ನಝೀರ್ ಮೇಲೆ ಗಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ನಝೀರ್ ಅವರನ್ನು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲ್ಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ.


Spread the love

Exit mobile version