Home Mangalorean News Kannada News ದನ ಸಾಕಣೆಗೆ ಪರಿಸರ ಇಲಾಖೆ ಅನುಮತಿ ಆದೇಶ ಹಿಂಪಡೆಯಿರಿ: ಹರೀಶ್ ಕಿಣಿ

ದನ ಸಾಕಣೆಗೆ ಪರಿಸರ ಇಲಾಖೆ ಅನುಮತಿ ಆದೇಶ ಹಿಂಪಡೆಯಿರಿ: ಹರೀಶ್ ಕಿಣಿ

Spread the love

ದನ ಸಾಕಣೆಗೆ ಪರಿಸರ ಇಲಾಖೆ ಅನುಮತಿ ಆದೇಶ ಹಿಂಪಡೆಯಿರಿ: ಹರೀಶ್ ಕಿಣಿ

ಉಡುಪಿ: ಹೈನುಗಾರಿಕೆ ನಡೆಸುವವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕೆಂಬ ಕರ್ನಾಟಕ ಬಿಜೆಪಿ ಸರಕಾರದ ಆದೇಶವನ್ನು ತಕ್ಷಣ ಹಿಂಡೆಯಬೇಕೆಂದು ಕಾಂಗ್ರೆಸ್ ಮುಖಂಡ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕ (ಹಾಲು ಉತ್ಪಾದಕರ ಸಂಘಗಳ ಕ್ಷೇತ್ರ) ಅಲೆವೂರು ಹರೀಶ್ ಕಿಣಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಗ್ರಾಮೀಣ ಜನರ ಕಾಮಧೇನು ಆಗಿರುವ ಹೈನುಗಾರಿಕೆಯನ್ನು ಅವಲಂಭಿಸಿರುವವರಿಗೆ ರಾಜ್ಯ ಬಿಜೆಪಿ ಸರಕಾರದ ಈ ನಿರ್ಧಾರದಿಂದ ಹೊಟ್ಟೆಗೆ ಹೊಡೆದಂತಾಗಿದೆ. ಈ ಆದೇಶ ಜಾರಿಗೆ ಬಂದರೆ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸರಕಾರದ ಈ ನಿರ್ಧಾರ ಮುಂದಿನ ದಿನಗಳಲ್ಲಿ ಕಾರ್ಪೋರೇಟ್ ಹೈನುಗಾರಿಕೆ ನಡೆಸುವವರಿಗೆ ಅನುಕೂಲ ಮಾಡಿಕೊಡಲು ಮೊದಲ ಹೆಜ್ಜೆ ಇಟ್ಟಂತಾಗಿದೆ. ಅದುದರಿಂದ ಬಡ, ಗ್ರಾಮೀಣ ಹೈನುಗಾರರಿಗೆ ಗೌರವಾನ್ವಿತ ಜೀವನ ನಡೆಸಲು ಅನುಕೂಲವಾಗುವಂತೆ ಸುಗ್ರೀವಾಜ್ಞೆ‌ ಮೂಲಕ ಕ್ರಮ ಕೈಗೊಳ್ಳುವಂತೆ ಹರೀಶ್ ಕಿಣಿ ಆಗ್ರಹಿಸಿದ್ದಾರೆ.


Spread the love

Exit mobile version