Home Mangalorean News Kannada News ದಾರಿಹೋಕ ವಿದ್ಯಾರ್ಥಿಗೆ ಕಚ್ಚಿದ ಸಾಕು ನಾಯಿ; ಠಾಣೆಯಲ್ಲಿ ಮ್ಹಾಲಕಿ ವಿರುದ್ದ ದೂರು ದಾಖಲು

ದಾರಿಹೋಕ ವಿದ್ಯಾರ್ಥಿಗೆ ಕಚ್ಚಿದ ಸಾಕು ನಾಯಿ; ಠಾಣೆಯಲ್ಲಿ ಮ್ಹಾಲಕಿ ವಿರುದ್ದ ದೂರು ದಾಖಲು

Spread the love

ದಾರಿಹೋಕ ವಿದ್ಯಾರ್ಥಿಗೆ ಕಚ್ಚಿದ ಸಾಕು ನಾಯಿ; ಠಾಣೆಯಲ್ಲಿ ಮ್ಹಾಲಕಿ ವಿರುದ್ದ ದೂರು ದಾಖಲು

ಮಂಗಳೂರು: ವಿದ್ಯಾರ್ಥಿಯೊರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದದ ವೇಳೆ ಸ್ಥಳೀಯ ಮನೆಯ ನಾಯಿ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿ ಕಚ್ಚಿದ  ಘಟನೆ ಶನಿವಾರ ನಡೆದಿದೆ.

ಘಟನೆಗೆ ಸಂಬಂಧೀಸಿ ಇದೀಗ ನಾಯಿಯ ಮ್ಹಾಲಕಿ ವಿರುದ್ಧ ನಗರದ ಬಂದರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಪತ್ರಾವೋ ಲೇನ್ ಬಳಿಯ ಅಲೋಷಿಯಸ್ ಕಾಲೇಜಿಗೆ ಹೋಗುವ ಇಂಟರ್ ಲಾಕ್ ರಸ್ತೆಯಲ್ಲಿನ ಮಹೇಂದ್ರ ಮ್ಯಾನರ್ ಅಪಾರ್ಟ್ ಮೆಂಟಿನ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದ ಬಿ.ಬಿ.ಎಮ್. ವಿದ್ಯಾರ್ಥಿಯ ಮೇಲೆ ಸ್ಥಳೀಯ ನಿವಾಸಿಯವರ  ನಾಯಿ ಕಂಪೌಂಡ್ ಒಳಗಡೆಯಿಂದ ರಸ್ತೆಗೆ ಹಾರಿ ಬಂದು ವಿದ್ಯಾರ್ಥಿಯ ಮೇಲೆ ದಾಳಿ ಮಾಡಿ, ಗಾಯಗೊಳಿಸಿದ್ದು, ಈ ವೇಳೆ ವಿದ್ಯಾರ್ಥಿ ಬೊಬ್ಬೆ ಹಾಕಿದ ಕಾರಣ ಸ್ಥಳೀಯ ನಿವಾಸಿಗಳು ಮತ್ತು ನಾಯಿಯ ಮ್ಹಾಲಕರು ಅವರು ಸ್ಥಳಕ್ಕೆ ಬಂದು ನಾಯಿಯನ್ನು ಬಿಡಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಯು  ನೀವು ನಾಯಿಯನ್ನು ಕಟ್ಟಿ ಹಾಕದೇ ಯಾಕೆ ನಿರ್ಲಕ್ಷತನದಿಂದ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಮ್ಹಾಲಕಿ ವಿದ್ಯಾರ್ಥಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿ ದೂರಿದ್ದಾರೆ.

ಈ ಕುರಿತು ಬಂದರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

ಚಿತ್ರ ಕೇವಲ ಸಾಂದರ್ಭಿಕವಾಗಿ ಉಪಯೋಗಿಸಲಾಗಿದೆ


Spread the love

Exit mobile version