Home Mangalorean News Kannada News ದಿನೇಶ್ ಅಮೀನ್ ಮಟ್ಟು, ಸೊರಕೆಗೆ ಜೀವ ಬೆದರಿಕೆ: ಪ್ರಕರಣ ದಾಖಲು

ದಿನೇಶ್ ಅಮೀನ್ ಮಟ್ಟು, ಸೊರಕೆಗೆ ಜೀವ ಬೆದರಿಕೆ: ಪ್ರಕರಣ ದಾಖಲು

Spread the love

ದಿನೇಶ್ ಅಮೀನ್ ಮಟ್ಟು, ಸೊರಕೆಗೆ ಜೀವ ಬೆದರಿಕೆ: ಪ್ರಕರಣ ದಾಖಲು

ಉಡುಪಿ: ಇದೀಗ ಮುಂದೂಡಲ್ಪಟ್ಟ ಬಿಲ್ಲವ-ಮುಸ್ಲಿಂ ಸ್ನೇಹ-ಸಮಾವೇಶಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರಿಗೆ ಹಾಗೂ ಸಮ್ಮಿಲನದ ಆಯೋಜಕರಲ್ಲಿ ಒಬ್ಬರಾದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ಕಡ್ತಲ ವಿಶ್ವನಾಥ ಪೂಜಾರಿ ವಿರುದ್ಧ ಉದ್ಯಾವರ ಗ್ರಾಪಂ ಸದಸ್ಯ ದಿವಾಕರ ಬೊಳ್ಜೆ ಉಡುಪಿ ನಗರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ದಿನೇಶ್ ಅಮೀನ್ ಮಟ್ಟು ಅವರಿಗೆ ವಿಶ್ವನಾಥ ಪೂಜಾರಿ ದೂರವಾಣಿ ಕರೆ ಮಾಡಿ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿರುವುದಾಗಿಯೂ ದೂರಿನಲ್ಲಿ ಅವರು ತಿಳಿಸಿದ್ದಾರೆ.

ಜ.11ರಂದು ಪುರಭವನದಲ್ಲಿ ನಡೆಯಬೇಕಿದ್ದ ಈ ಸಮಾವೇಶಕ್ಕೆ ಕೆಲವು ಬಿಲ್ಲವ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯನ್ನೂ ಹುಟ್ಟು ಹಾಕಲಾಗಿತ್ತು. ಬಳಿಕ ಸಂಘಟಕರು ಕೆಲವು ಕಾರಣಗಳಿಗಾಗಿ ಸಮಾವೇಶವನ್ನು ಮುಂದೂಡುವ ನಿರ್ಧಾರ ಪ್ರಕಟಿಸಿದ್ದರು.


Spread the love

Exit mobile version