Home Mangalorean News Kannada News ದೇಯಿ ಬೈದೆತಿಗೆ ಅವಮಾನ ಮಾಡಿದ ವ್ಯಕ್ತಿಯ ಬಂಧನ

ದೇಯಿ ಬೈದೆತಿಗೆ ಅವಮಾನ ಮಾಡಿದ ವ್ಯಕ್ತಿಯ ಬಂಧನ

Spread the love

ದೇಯಿ ಬೈದೆತಿಗೆ ಅವಮಾನ ಮಾಡಿದ ವ್ಯಕ್ತಿಯ ಬಂಧನ

ಮಂಗಳೂರು: ತುಳುನಾಡಿನ ಅವಳಿ ವೀರ ಕಾರಣಿಕ ಪುರಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಯವರನ್ನು ಅವಮಾನಿಸಿದ ಪ್ರಕರಣಕ್ಕೆ ಸಂಬಂಧೀಸಿ ಹನೀಫ್ ಈಶ್ವರಮಂಗಲ ಎಂಬಾತನನ್ನು ಸಂಪ್ಯ ಠಾಣಾ ಪೋಲಿಸರು ಭಾನುವಾರ ಬಂಧಿಸಿದ್ದಾರೆ.

ಕೋಟಿ ಚೆನ್ನಯರ ಹುಟ್ಟೂರಾದ ಬಡಗನ್ನೂರು ಗ್ರಾಮದ ಪಡುಮಲೆಯಲ್ಲಿನ ಔಷದಿ ವನದಲ್ಲಿರುವ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಯವರ ಮೂರ್ತಿಯ ಎದೆಯನ್ನು ಮುಟ್ಟುವಂತಹ ಅಶ್ಲೀಲ ಭಂಗಿಯಲ್ಲಿ ಭಾವಚಿತ್ರ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳರವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೋಮು ಪ್ರಚೋದನೆಗೆ ಪ್ರಚೋದನೆ ನೀಡಿದ ಆರೋಪಡಿ ಪೋಲಿಸರು ಬಂಧಿಸಿದ್ದಾರೆ.


Spread the love

Exit mobile version