Home Mangalorean News Kannada News ನೆಲ್ಯಾಡಿಯಲ್ಲಿ ಬೊಲೆರೋ ಹಾಗೂ ಲಾರಿ ಬೊಲೆರೋ ಢಿಕ್ಕಿ : ಮೂವರು  ಮೃತ್ಯು; ಓರ್ವ ಗಂಭೀರ

ನೆಲ್ಯಾಡಿಯಲ್ಲಿ ಬೊಲೆರೋ ಹಾಗೂ ಲಾರಿ ಬೊಲೆರೋ ಢಿಕ್ಕಿ : ಮೂವರು  ಮೃತ್ಯು; ಓರ್ವ ಗಂಭೀರ

Spread the love

ನೆಲ್ಯಾಡಿಯಲ್ಲಿ ಬೊಲೆರೋ ಹಾಗೂ ಲಾರಿ ಬೊಲೆರೋ ಢಿಕ್ಕಿ : ಮೂವರು  ಮೃತ್ಯು; ಓರ್ವ ಗಂಭೀರ

ನೆಲ್ಯಾಡಿ: ಮಹೀಂದ್ರಾ ಬೊಲೆರೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಸಂಭವಿಸಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಬೊಲೆರೋ ನಡುವೆ ನೆಲ್ಯಾಡಿಯ ಹಳ್ಳ ಸೇತುವೆಯ ಬಳಿ ಮುಖಾಮುಖಿ ಢಿಕ್ಕಿಯಾಗಿತ್ತು.

ಘಟನೆಯಲ್ಲಿ ಬೊಲೆರೋದಲ್ಲಿದ್ದ ಸತ್ತಾರ್ ಮೊರಂಕಾಲ, ಸ್ಯಾಮ್ಸನ್ ಹಾಗೂ ಸೈರಸ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಜನಾರ್ದನ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version