Home Mangalorean News Kannada News ಪತ್ರಕರ್ತರು – ಪೋಲಿಸರ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯ ಎಸ್.ಪಿ ಇಲವೆನ್ ಗೆಲುವು

ಪತ್ರಕರ್ತರು – ಪೋಲಿಸರ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯ ಎಸ್.ಪಿ ಇಲವೆನ್ ಗೆಲುವು

Spread the love

ಪತ್ರಕರ್ತರು – ಪೋಲಿಸರ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯ ಎಸ್.ಪಿ ಇಲವೆನ್ ಗೆಲುವು

ಉಡುಪಿ: ಉಡುಪಿ ಜಿಲ್ಲಾಪೊಲೀಸ್ ತಂಡ ಎಸ್.ಪಿ ಇಲವೆನ್ ಹಾಗೂ ಉಡುಪಿ ಪ್ರೆಸ್ ಕ್ಲಬ್ ತಂಡದ ನಡುವೆ ಸೌಹಾರ್ದ ಪಂದ್ಯ ನಡೆಯಿತು. ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಎಸ್.ಪಿ ಇಲವೆನ್ ತಂಡ 59 ರನ್ ಗಳ ಗೆಲುವು ಸಾಧಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದ ಉಡುಪಿ ಪ್ರೆಸ್ ಕ್ಲಬ್ ತಂಡ, ಪೊಲೀಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ಬಿರುಸಿನ ಬ್ಯಾಟಿಂಗ್ ನಡೆಸಿದ ಎಸ್.ಪಿ ಇಲವೆನ್ ತಂಡ ನಿಗದಿತ 10 ಓವರ್ ಗಳಲ್ಲಿ 134 ರನ್ ಗಳಿಸಿತು. ಆರಂಭಿಕ ಒವರಿನಲ್ಲಿ ಉತ್ತಮ ಮೊತ್ತವನ್ನು ಚೇಸ್ ಮಾಡಿದ ಪ್ರೆಸ್ ಕ್ಲಬ್ ತಂಡವು ಸ್ಪೋಟಕ ಬ್ಯಾಟಿಂಗ್ ನಡೆಸಿತಾದರೂ 59 ರನ್ ಅಂತರದಲ್ಲಿ ಸೋಲಬೇಕಾಯ್ತು.

ಪೋಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್ ಬ ನಿಂಬರಗಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಕೀಪಿಂಗ್ ನಲ್ಲೂ ಮಿಂಚಿ ಕಪ್ತಾನನ ಪ್ರದರ್ಶನ ತೋರಿದರು. ಪತ್ರಕರ್ತ ದೀಪಕ್ ಜೈನ್ ಪ್ರೆಸ್ ಕ್ಲಬ್ ತಂಡದ ನೇತೃತ್ವವಹಿಸಿದ್ದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಜೈ ಶಂಕರ್, ಪತ್ರಕರ್ತರ ಸಂಘದ ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೇಚಾರ್, ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಜತೆ ಕಾರ್ಯದರ್ಶಿ ಮೈಕಲ್ ರೊಡ್ರಿಗಸ್, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಮಾಜಿ ಕೋಶಾಧಿಕಾರಿ, ರಾಜೇಶ್ ಶೆಟ್ಟಿ, ಸುವರ್ಣ ಟಿವಿ ವರದಿಗಾರ ಶಶಿಧರ ಮಾಸ್ತಿಬೈಲ್ ಹಾಜರಿದ್ದರು. ಕಸ್ತೂರಿ ವಾಹಿನಿ ವರದಿಗಾರ ರಹೀಮ್ ಉಜಿರೆ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು.

ಚಿತ್ರಗಳು: ಅಂಕಿತ್ ಶೆಟ್ಟಿ


Spread the love

Exit mobile version