Home Mangalorean News Kannada News ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ತಂಡದಿಂದ ವ್ಯಕ್ತಿಯ ಮೇಲೆ ಹಲ್ಲೆ

ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ತಂಡದಿಂದ ವ್ಯಕ್ತಿಯ ಮೇಲೆ ಹಲ್ಲೆ

Spread the love

ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ತಂಡದಿಂದ ವ್ಯಕ್ತಿಯ ಮೇಲೆ ಹಲ್ಲೆ

ಬಂಟ್ವಾಳ: ಪರಿಚಯಸ್ಥ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 29ರಂದು ಪರಂಗೀಪೇಟೆ ಬಳಿ ಉಡುಪಿ ಕೋಟದ ನಿವಾಸಿಯಾದ ಸುರೇಶ ರವರು ತಮ್ಮ ಕಾರಿ ನಲ್ಲಿ ಕೆಲಸ ನಿಮಿತ್ತ ಬಂಟ್ವಾಳದಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಪರಂಗಿಪೇಟೆಯ ಬಸ್ ನಿಲ್ದಾಣದ ಬಳಿ 3.00 ಗಂಟೆ ಸಮಯಕ್ಕೆ ತಮಗೆ ಪರಿಚಯದ ಮಹಿಳೆಯೊಬ್ಬರನ್ನು ನೋಡಿ ಕಾರು ನಿಲ್ಲಿಸಿ ಮಾತನಾಡಿ ಅಲ್ಲಿಂದ ಹೊರಡುವಾಗ ಸುಮಾರು 8 ರಿಂದ 10 ಜನ ಯುವಕರು ಕಾರನ್ನು ಅಡ್ಡಗಟ್ಟಿ ಸದರಿ ಸುರೇಶ್ ರವರಿಗೆ ನಿನೇನು ಅವರ ಬಳಿ ಮಾತನಾಡೊದು ಎಂದು ಹೇಳಿ ಅವಾಚ್ಯ ಶಬ್ದ ಗಳಿಂದ ಬಯ್ದು,ಕೈ ಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೋಲಿಸರು ಅಲ್ಲಿ ಸೇರಿದ್ದ ಗುಂಪನ್ನು ಚದುರಿಸಿ ಸುರೇಶ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಕುರಿತಂತೆ ಸುರೇಶ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಇದ್ದು ಶೀಘ್ರವಾಗಿ ಅವರನ್ನು ಬಂದಿಸಲಾಗುವುದು. ಮಹಿಳೆಯನ್ನು ಅವರ ಸಂಬಂಧಿಕರೊಂದಿಗೆ ಸುರಕ್ಷಿತವಾಗಿ ಕಳುಹಿಸಿ ಕೊಟ್ಟಿದ್ದು.ಸುರೇಶ್ ರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಅರನ್ನು ಅವರ ಸಂಬಂಧಿಕರೊಂದಿಗೆ ಕಳುಹಿಸಿ ಕೊಟ್ಟಿರುತ್ತೆವೆ ಎಂದು ಪೋಲಿಸರು ತಿಳಿಸಿದ್ದಾರೆ.


Spread the love

Exit mobile version