Home Mangalorean News Kannada News ಪ್ರಚಾರವಿಲ್ಲದೆ ಸ್ವಂತ ಖರ್ಚಿನಿಂದ ಅಸಹಾಯಕರಿಗೆ ಊಟ, ಉಪಾಹಾರ ನೀಡುತ್ತಿರುವ ಮಮತಾ ಕೇಶವ್

ಪ್ರಚಾರವಿಲ್ಲದೆ ಸ್ವಂತ ಖರ್ಚಿನಿಂದ ಅಸಹಾಯಕರಿಗೆ ಊಟ, ಉಪಾಹಾರ ನೀಡುತ್ತಿರುವ ಮಮತಾ ಕೇಶವ್

Spread the love

ಪ್ರಚಾರವಿಲ್ಲದೆ ಸ್ವಂತ ಖರ್ಚಿನಿಂದ ಅಸಹಾಯಕರಿಗೆ ಊಟ, ಉಪಾಹಾರ ನೀಡುತ್ತಿರುವ ಮಮತಾ ಕೇಶವ್

ಮಂಗಳೂರು: ವಿಶ್ವವ್ಯಾಪ್ತಿಯಲ್ಲಿ ಕೊರೋನಾ ಸಾಂಕ್ರಾಮಿಕರೋಗದಿಂದ ತತ್ತರಿಸುತ್ತಿದು ಇದರ ದುಷ್ಪರಿಣಾಮ ಭಾರತ ದೇಶಕ್ಕೂ ಬಹಳ ಆರ್ಥಿಕ ,ಸಾಮಾಜಿಕ ಅರೋಗ್ಯ ಹಾಗು ಹಲವಾರು ಈ ರೋಗಕ್ಕೆ ಬಲಿಯಾಗಿದಾರೆ.
ಹೀಗಿರುವಾಗ ಹತ್ತು ಹಲವಾರು ಸಂಸ್ಥೆಗಳು ,ರಾಜಕೀಯಪಕ್ಷದವರು ನೆರವಿನ ಹಸ್ತ ನೀಡಿರುತಾರೆ . ಅದೇ ರೀತಿ ಮಂಗಳೂರಿನ ಚಿಲಿಂಬಿ ನಿವಾಸಿ ಮಮತಾ ಕೇಶವ (42 ವರ್ಷ ) ಇವರು ಯಾವುದೇ ಪ್ರಚಾರ ಅಥವಾ ಸ್ವಾರ್ಥ ಇಲ್ಲದೆ ತನ್ನ ಸ್ವಂತ ಖರ್ಚಿನಿಂದ ಸಮಾಜಕ್ಕೆ ಉಪಹಾರ ಹಾಗು ಊಟದ ವ್ಯವಸ್ಥೆಯನ್ನು ಮಾಡಿ ಅಸಾಯಕರ ಹಾಗು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುತ್ತಾರೆ .

ಇವರು ಯಾವುದೇ ಪ್ರಚಾರ ಮಾಧ್ಯಮಕ್ಕೆ ಮುಂದೆ ಬರದೇ ತನ್ನ ಸ್ವಾಭಿಮಾನ ಹಾಗು ಮನುಷತ್ವಕ್ಕೆ ಸಮಾಧಾನವಾಗಿ ಕೆಲಸ ಮಾಡಿ ಬಂದಿರುತ್ತಾರೆ.ಇವರು ಯಾವುದೇ ಸ್ವಾರ್ಥ ವಿಲ್ಲದೆ ತನ್ನ ಆತ್ಮಸಾಕ್ಷಿಯಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತಿದ್ದರೆ .

ಮಮತಾ ಕೇಶವ್ ರವರು ಸುಮಾರು 25 ದಿವಸದಿಂದ ದೀನಾಲು ಬೆಳ್ಳಿಗೆ 8 :00 ಗಂಟೆಗೆ 150 ಮಂದಿ ಅಸಾಯಕರಿಗೆ ಉಪಹಾರ ಹಾಗು ರಾತ್ರಿ ಸರಿಯಾಗಿ 8 :00 ಗಂಟೆಗೆ 60 ಮಂದಿಗೆ ಊಟದ ವ್ಯವಸ್ಥೆಗೆ ಯನ್ನು ಸ್ವಂತ ಖರ್ಚಿನಿಂದ ಮಾಡ್ತಾ ಬಂದಿರುತಾರೆ . ಇವರು ಉರ್ವಸ್ಟೋರ್ , ಲೇಡಿಹಿಲ್ ,ಮಣ್ಣಗುಡ್ಡ , ಚಿಲಿಂಬಿ, ಹಾಗು ಇತರ ಜಾಗಗಳ್ಲಲಿ ತನ್ನ ಸ್ವಂತ ವಾಹನದಲ್ಲಿ ಆಹಾರ ಸರಬರಾಜು ಮಾಡುತ್ತ ಬಂದಿದಾರೆ . ಇನ್ನು ಕೂಡ ಲೊಕ್ಡೌನ್ ಮುಗಿಯುವವರೆಗೆ ಸೇವೆಮಾಡುವ ಇರಾದೆಯಲ್ಲಿ ಇರುತಾರೆ . ಇವರಿಗೆ ಸ್ಫೂರ್ತಿ ಹಾಗು ಸಹಾಯವಾಗಿ ಅವರ ಜೊತೆ ಮಂಗಳೂರಿನ ವಕೀಲರಾದ ಶ್ರೀ ರಾಘವೇಂದ್ರ ರಾವ್ , ಸುಧೀರ್ರಾಜ್ , ಚಿತ್ರಾಕ್ಷ , ಹಾಗು ಸತೀಶ್ ಅವರು ಬೆಂಬಲ ನಿಂತಿದಾರೆ.


Spread the love

Exit mobile version