Home Mangalorean News Kannada News ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ – ಬಹುಮಖ ಪ್ರತಿಭೆಯ ಕು| ಸಾನ್ವಿ ಕಿರಣ್ ರೈ

ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ – ಬಹುಮಖ ಪ್ರತಿಭೆಯ ಕು| ಸಾನ್ವಿ ಕಿರಣ್ ರೈ

Spread the love

ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ – ಬಹುಮಖ ಪ್ರತಿಭೆಯ ಕು| ಸಾನ್ವಿ ಕಿರಣ್ ರೈ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಜನೆಯೊಂದಿಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಅಪ್ರತಿಮ ಸಾಧನೆ ಹಾಗೂ ವಿದ್ಯಾಕ್ಷೇತ್ರದಲ್ಲಿ ಹೊಸಕಲ್ಪನೆಯ ಅವಿಸ್ಕಾರವನ್ನು ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಿನಿಷ್ಟ್ರಿ ಆಫ್ ಎಜುಕೇಶನ್ ಯು.ಎ.ಇ. ಗುರುತ್ತಿಸಿ 1998 ರಿಂದ ಪ್ರಾರಂಭಿಸಲಾದ “ಹಮದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ಪ್ರಶಸ್ತಿಯನ್ನು” ನೀಡುತ್ತಾ ಬರಲಾಗುತ್ತಿದೆ.

ಯು.ಎ.ಇ.ಯ ಅಬುಧಾಬಿಯಲ್ಲಿ ಸಂತ ಜೋಸೇಫರ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ 7ನೇ ತರಗತಿಯಲ್ಲಿ ಇರುವಾಗಲೇ ಕು| ಸಾನ್ವಿ ಕಿರಣ್ ರೈ 20 ಏಪ್ರಿಲ್ 2016ರಲ್ಲಿ ಡೆಪ್ಯೂಟಿ ರೂಲರ್ ಆಫ್ ದುಬಾಯಿ ಗೌ| ಶೇಖ್ ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ಇವರಿಂದ ಪರಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಯನ್ನು ದುಬಾಯಿಯಲ್ಲಿ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ವರಣರಂಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಡೆದುಕೊಂಡಿದ್ದಾಳೆ.

ಪ್ರಸ್ತುತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾನ್ವಿ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಈ ಬಾರಿ ದುಬಾಯಿ ಜೆ. ಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಸಭಾಂಗಣದಲ್ಲಿ ನಡೆದ ಯು.ಎ.ಇ. ಬಂಟ್ಸ್ 44ನೇ ಸ್ನೇಹಮಿಲನದಲ್ಲಿ ನೀಡಲಾಗುವ 2018ನೇ ಸಾಲಿನ “ಪ್ರತಿಭಾ ಪುರಸ್ಕಾರ” ವನ್ನು ಮಹಾಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರಿಂದ ತನ್ನ ಪೋಷಕರ ಸಮ್ಮುಖದಲ್ಲಿ ಪಡೆದುಕೊಂಡಿದ್ದಾಳೆ.

ಸಾನ್ವಿ ಕಿರಣ್ ರೈ ಬೆಳೆದು ಬಂದ ಹಾದಿ…
ಕು| ಸಾನ್ವಿ, ಅಬುಧಾಬಿಯ ಎನ್ ಎಂ. ಸಿ. ಸ್ಪೆಷಾಲಿಟಿ ಹಾಸ್ಪಿಟಲಿನಲ್ಲಿ ್ಲಪ್ರಖ್ಯಾತ ವೈದ್ಯರಾಗಿರುವ ಡಾ| ಕಿರಣ್ ಕುಮಾರ್ ರೈ ಹಾಗೂ ಶ್ರೀಮತಿ ಸುಪ್ರಿಯಾ ಕಿರಣ್ ರೈ ದಂಪತಿಗಳ ಪುತ್ರಿ, ಕರಾವಳಿ ಕರ್ನಾಟಕದ ತುಳುನಾಡಿನ ಮಿಜಾರು ಗುತ್ತು ಶ್ರೀ ವಿಶ್ವನಾಥ ರೈ, ಕಿದಿಯೂರು ಬಡಗುಮನೆ ಶ್ರೀಮತಿ ಇಂದಿರಾ ರೈ ಹಾಗೂ ಮುಲ್ಲಡ್ಕ ಮುಟ್ಟಿಕಲ್ ಶಿವಣ್ಣ ಶೆಟ್ಟಿ, ಇನ್ನಾ ಬರಿಮಾರ್ ಪ್ರಮೋದ ಶೆಟ್ಟಿ ಇವರುಗಳ ಮೊಮ್ಮಗಳು.

ಸಾನ್ವಿ ಶೈಕ್ಷಣಿಕವಾಗಿ ಭಾಗವಹಿಸುವ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಚಲವಂತೆ. ಪ್ರಸ್ತುತ ವಿದ್ಯಾಸಂಸ್ಥೆಯಲ್ಲಿ ಪರಿಸರ ಜಾಗೃತಿಯ “ವೆರ್ಟೆ ಕ್ಲಬ್” ನಲ್ಲಿ ಸಹ ಕಾರ್ಯದರ್ಶಿ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ಭರತನಾಟ್ಯದಲ್ಲಿ ವಿಶೇಶ ಒಲವು ಪಡೆದಿರುವ ಸಾನ್ವಿ ಭರತನಾಟ್ಯ ಅಭ್ಯಾಸದೊಂದಿಗೆ ಗುರುಗಳಾದ ಶ್ರೀ ಕುಂದನ್ ಮುಖರ್ಜಿಯವರಿಂದ ಕಥಕ್ ಶೈಲಿ ನಾಟ್ಯ ತರಭೇತಿಯನ್ನು ಪಡೆದುಕೊಂಡಿದ್ದಾಳೆ. ಯು.ಎ.ಇ.ಯ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತನ್ನದಾಗಿಸಿ ಕೊಂಡಿದ್ದಾಳೆ. ಅವುಗಳಲ್ಲಿ ಪ್ರಮುಖವಾದುದು ‘ಏಶ್ಯಾನೆಟ್ ಜೀಪಾಸ್ ಯೂತ್ ಪೆಸ್ಟ್’, ಇಂಡಿಯಾ ಸೊಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ ಆಶ್ರಯದಲ್ಲಿ ಐ.ಎಸ್.ಸಿ. ಯು.ಎ.ಇ. ಓಪನ್ ಯೂತ್ ಫೆಸ್ಟ್, ಯು.ಎ.ಇ. ಬಂಟ್ಸ್ ನೃತ್ಯ ಕಾರ್ಯಕ್ರಮಗಳಲ್ಲಿ ಸಾನ್ವಿಯ ಪ್ರತಿಭೆ ಅನಾವರಣ ಗೊಂಡಿದೆ.
ಚಿತ್ರಕಲೆಯಲ್ಲಿಯೂ ಹಸ್ತಕೌಶಲ್ಯವನ್ನು ಹೊಂದಿರುವ ಸಾನ್ವಿ ದುಬಾಯಿಯಲ್ಲಿ ನಡೆದ ಇಂಡಿಯಾ ಪ್ರಾಪರೆಟಿ ಶೋ ದಲ್ಲಿ “ಡ್ರಾಯೂವರ್ ಡ್ರೀಂ ಹೊಂ” ಚಿತ್ರ ರಚನೆಯಲ್ಲಿ ದ್ವಿತಿಯಾ ಸ್ಥಾನ 20 ಗ್ರಾಂ ಚಿನ್ನದ ನಾಣ್ಯ ಪಡೆದಿದ್ದಾಳೆ. ಹಾಗೂ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ.
ಸಾನ್ವಿ ಉತ್ತಮ ಎಳೆಯ ವಾಗ್ಮೀ, ಕಾವ್ಯ ವಾಚನದಲ್ಲಿಯೂ ವಿಶೇಷ ಪ್ರತಿಭೆಯನ್ನು ಹಲವಾರು ವೇದಿಕೆಗಲಲ್ಲಿ ಸಾಕ್ಷೀಕರಿಸಿದ್ದಾಳೆ. “ಯು.ಎ.ಇ. ಮಟ್ಟದ ರಾಷ್ಟ್ರೀಯ ಏಶ್ಯಾನೆಟ್ ಜೀಪಾಸ್ ಯೂತ್ ಫೆಸ್ಟ್” ಅಂತರ್ ಶಾಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿ ಕೊಂಡಿದ್ದಾಳೆ.
ಕ್ರೀಡಾ ಚಟುವಟಿಕೆಯಲ್ಲಿಯೂ ಸಾನ್ವಿಯದ್ದು ಎತ್ತಿದ ಕೈ. ಅಬುಧಾಬಿ ಮಲಯಾಳಿ ಸಮಾಜದವರು ಏರ್ಪಡಿಸಿದ್ದ ಯು.ಎ.ಇ. ಮಟ್ಟದ ಕ್ರೀಡಾಕೂಟದಲ್ಲಿ “ಶಾಟ್ ಪುಟ್” ಎಸೆತದಲ್ಲಿ “ಅಥೆಲೆಟಿಕ್ಸ್ ಚಾಂಪಿಯನ್ ಶಿಫ್” ತನ್ನದಾಗಿಸಿಕೊಂಡು, ದಾಖಲಿಸಿದ್ದಾಳೆ.

“ಪರಿಸರ ಸಂರಕ್ಷಣ” ಮತ್ತು ಸೇವಾ ಮತ್ತು ದಾನ ಕಾರ್ಯಗಳಲ್ಲಿಯೂ ಸಾನ್ವಿ ತನ್ನನ್ನು ತಾನು ತೊಡಗಿಸಿಕೊಂಡು, “ಗ್ರೀನ್ ಹೋಪ್ – ಎನ್ವಿರಾನ್ಮೆಂಟಲ್ ಗ್ರೂಪ್”ನ ಸದಸ್ಯತ್ವ ಪಡೆದುಕೊಂಡಿದ್ದಾಳೆ. ವೇಸ್ಟ್ ರಿಸೈಕ್ಲಿಂಗ್ (ತ್ಯಾಜ ವಸ್ತುಗಳ ಮರುಬಳಕೆ) ಅಭಿಯಾನದಲ್ಲಿ ಭಾಗವಹಿಸಿಕೊಂಡು ಬರುತಿದ್ದಾಳೆ.
ಬಹುಮಖ ಪ್ರತಿಭೆಯ ಸದಾ ಚೈತನ್ಯದ ಚಿಲುಮೆಯಾಗಿರುವ ಕು| ಸಾನ್ವಿ ಕಿರಣ್ ರೈ ಯ ವಿವಿಧ ಚಟುವಟಿಕೆಗಳಲ್ಲಿ ತನ್ನ ಪ್ರತಿಭೆಯ ಮೂಲಕ ತನ್ನ ಪೋಷಕರಿಗೂ, ವಿದ್ಯಾಸಂಸ್ಥೆಗೂ ಹೆಸರು ಗಳಿಸಿರುವವುದನ್ನು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ. ಎಳೆಯ ವಯಸ್ಸಿನಲ್ಲೇ ಬಹುಮುಖ ಪ್ರತಿಭೆ ಇರುವ ಸಾನ್ವಿಯ ಯಶಸ್ವಿ ಹೆಜ್ಜೆಗಳು ಶಾಘನೀಯವಾಗಿದೆ.
ಸಾನ್ವಿ ಇನ್ನೂ ಹೆಚ್ಚಿನ ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್ ರೈ – ಯು.ಎ.ಇ.


Spread the love

Exit mobile version