Home Mangalorean News Kannada News ಫೇಸ್‌ಬುಕ್‌ನಲ್ಲಿ ತುಳು ದೈವಾರಾಧನೆ ಬಗ್ಗೆ ನಿಂದನೆ: ಆರೋಪಿ ಬಂಧನ

ಫೇಸ್‌ಬುಕ್‌ನಲ್ಲಿ ತುಳು ದೈವಾರಾಧನೆ ಬಗ್ಗೆ ನಿಂದನೆ: ಆರೋಪಿ ಬಂಧನ

Spread the love

ಫೇಸ್‌ಬುಕ್‌ನಲ್ಲಿ ತುಳು ದೈವಾರಾಧನೆ ಬಗ್ಗೆ ನಿಂದನೆ: ಆರೋಪಿ ಸೆರೆ

ಮಂಗಳೂರು: ಫೇಸ್‌ಬುಕ್‌ನಲ್ಲಿ ತುಳು ದೈವಾರಾಧನೆ ಬಗ್ಗೆ ನಿಂದಿಸುತ್ತಿದ್ದ ಉತ್ತರ ಕನ್ನಡ ಮೂಲದ ಆರೋಪಿಯನ್ನು ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮುದ್ದುರಾಜ ಕನ್ನಡಿಗ ಯಾನೆ ಮುದ್ದುರಾಜ ದೇಸಾಯಿಗೌಡ (37) ಬಂಧಿತ ಆರೋಪಿ.

ಈತ ಫೇಸ್‌ಬುಕ್‌ನಲ್ಲಿ ‘ಟ್ರೋಲ್ ಹೂ ಟ್ರೋಲ್ ಕನ್ನಡಿಗ’ ಎಂಬ ಪೇಜ್ ತೆರೆದು ಅದರಲ್ಲಿ ತುಳುನಾಡಿನ ದೈವಾರಾಧನೆಯ ಬಗ್ಗೆ ನಿಂದಿಸುತ್ತಿದ್ದ. ಈ ಬಗ್ಗೆ ಅರ್ನಾಲ್ಡ್ ತುಳುವೆ ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ‘ಆರೋಪಿಯು ಭಕ್ತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಕಾನೂನು ಕ್ರಮ ಜರಗಿಸುವಂತೆ’ ಎಂದು ಒತ್ತಾಯಿಸಿದ್ದರು.

ದೂರು ಸ್ವೀಕರಿಸಿದ ಸೈಬರ್ ಕ್ರೈಂ ಪೊಲೀಸರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸಿದ್ದಾಪುರದ ಅವರಗುಪ್ತಾ ಎಂಬಲ್ಲಿ ಬಂಧಿಸಿ ಕ್ರಮ ಜರುಗಿಸಿದ್ದಾರೆ. ಆರೋಪಿಯಿಂದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸೈಬರ್ ಕ್ರೈಂ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಗೋವಿಂದ ರಾಜು, ಸಿಬ್ಬಂದಿಗಳಾದ ಓಂದಾಸ್, ಕುಮಾರ್, ದಿನೇಶ್ ಬೇಕಲ್, ಮಾಯಾ ಪ್ರಭು, ವಿಜಯ ಶೆಟ್ಟಿ, ವಿದೀಪ್, ಮನೋಜ್ ಕುಮಾರ್ ಪಾಲ್ಗೊಂಡಿದ್ದರು.


Spread the love

Exit mobile version