Home Mangalorean News Kannada News ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳಿಗೆ ಕೂಡ ವಿಶೇಷ ಪ್ಯಾಕೇಜ್ ಘೋಷಿಸಲು ಖಾದರ್ ಆಗ್ರಹ

ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳಿಗೆ ಕೂಡ ವಿಶೇಷ ಪ್ಯಾಕೇಜ್ ಘೋಷಿಸಲು ಖಾದರ್ ಆಗ್ರಹ

Spread the love

ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳಿಗೆ ಕೂಡ ವಿಶೇಷ ಪ್ಯಾಕೇಜ್ ಘೋಷಿಸಲು ಖಾದರ್ ಆಗ್ರಹ

ಮಂಗಳೂರು: ಲಾಕ್ ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳಿಗೆ ಕೂಡ ಕರ್ನಾಟಕ ಸರಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಟೈಲರ್ ಗಳಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿ, ಈಗಾಗಲೇ ನಾವು ಸಂಬಂಧಪಟ್ಟ ಸಚಿವರಿಗೆ ಮನವಿಗಳನ್ನು ಮಾಡಿದ್ದು ಇನ್ನಾದರೂ ಸರಕಾರ ಕಣ್ಣು ತೆರಯುವಂತಾಗಬೇಕು ಮತ್ತು ಟೈಲರ್ ಗಳ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ನಾವು ಈಗಾಗಲೇ ಸ್ಪಷ್ಠವಾಗಿ ಆಗ್ರಹಿಸಿದ್ದು ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳನ್ನು ಈ ಪ್ಯಾಕೇಜ್ ಅಡಿಯಲ್ಲಿ ಸೇರಿಸಬೇಕು ಸರಕಾರ ಕೂಡ ಸೇರಿಸುವ ಆಶ್ವಾಸನೆ ನೀಡಿದ್ದು ಬಿಟ್ಟರೆ ಯಾವುದೇ ರೀತಿಯ ಘೊಷಣೆ ಮಾಡಿಲ್ಲ. ಇನ್ನಾದರೂ ಮಾಡಲಿ ಎಂದು ಆಗ್ರಹಿಸಿದರು.


Spread the love

Exit mobile version