Home Mangalorean News Kannada News ಬೆಂಗಳೂರು: ಬಂಧನ ವೇಳೆ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ – ಗಾಯ

ಬೆಂಗಳೂರು: ಬಂಧನ ವೇಳೆ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ – ಗಾಯ

Spread the love

ಬೆಂಗಳೂರು: ಬಂಧನ ವೇಳೆ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್ – ಗಾಯ

ಬೆಂಗಳೂರು: ರೌಡಿ ಶೀಟರ್ ಒರ್ವನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ವೇಳೆ ಪೊಲೀಸ್ ಫೈರಿಂಗ್ ನಡೆದಿದ್ದು ಅದರಲ್ಲಿ ರೌಡಿ ಶೀಟರ್ ಗಾಯಗೊಂಡ ಘಟನೆ ಬೆಂಗಳೂರು ದೊಡ್ಡಬಳ್ಳಾಪುರ ಸಮೀಪದ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಅಜಯ್ ಕುಮಾರ್ (35) ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಿಗ್ಗೆ ಚನ್ನರಾಯಪಟ್ಟಣ ಪಿಎಸ್ ಐ ಮತ್ತವರ ತಂಡ ಕೋರಮಂಗಲ ಬಳಿ ಅಜಯ್ ಕುಮಾರ್ ನನ್ನ ಬಂಧಿಸಲು ತೆರಳಿದ್ದ ವೇಳೆ ಪೊಲೀಸ್ ಸಿಬಂದ ನಾರಾಯಣ ಸ್ವಾಮಿ ಮೇಲೆ ಹಲ್ಲೆ ಯತ್ನ ನಡೆಸಿದ್ದು ಈ ವೇಳೆ ಪಿ ಎಸ್ ಐ ನಂದಿಶ್ ಆರೋಪಿ ಅಜಯ್ ಕಾಲಿಗೆ ಫೈರಿಂಗ್ ಮಾಡಿದ್ದು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಆರೋಪಿ ಹಲವಾರು ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಡಕಾಯತಿ, ಅಪಹರಣ ಹಾಗೂ ಕೊಲೆಯತ್ನ ಆರೋಪಗಳಲ್ಲಿ ಭಾಗಿಯಾಗಿದ್ದು ತನಿಖೆ ನಡೆಯುತ್ತಿದೆ


Spread the love

Exit mobile version