Home Mangalorean News Kannada News ಬೆಂಗ್ರೆಯಲ್ಲಿ ಕಾಂಕ್ರಿಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ

ಬೆಂಗ್ರೆಯಲ್ಲಿ ಕಾಂಕ್ರಿಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ

Spread the love

ಬೆಂಗ್ರೆಯಲ್ಲಿ ಕಾಂಕ್ರಿಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ

ಮಂಗಳೂರು: ಪ್ರಕೃತಿ ವಿಕೋಪದ ಅನುದಾನದಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ನೇ ಬೆಂಗ್ರೆ ವಾರ್ಡಿನ ಕುಸುಮ ಸುರೇಶ್ ಅವರ ಮನೆಯಿಂದ ಕಸಬಾ ಬೆಂಗ್ರೆ ತನಕ 10 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಶಾಸಕರೊಂದಿಗೆ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಸಂಜಯ ಪ್ರಭು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ, ಸ್ಥಳೀಯ ಪ್ರಮುಖರಾದ ಸಲೀಂ ಬೆಂಗ್ರೆ, ಮೊಹಮ್ಮದ್ ಹನೀಫ್, ರಿಯಾಜ್, ಅಮೀರ್, ಆಸೀಫ್, ಉನ್ನಾ ಸಹಿತ ಅನೇಕರು ಉಪಸ್ಥಿತರಿದ್ದರು


Spread the love

Exit mobile version