Home Mangalorean News Kannada News ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ

ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ

Spread the love

ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ

ಬೈಂದೂರು: ಬೈಂದೂರಿನ ಎಳಜಿತ್ ಎಂಬಲ್ಲಿ ಎರಡು ಹಟ್ಟಿಯಿಂದ ದನಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧೀತನನ್ನು ಗೋಳಿಯಂಗಡಿ ಹೈಕಾಡಿ ನಿವಾಸಿ ಮೊಹಮ್ಮದ್ ಅಝೀಮ್ ಎಂದು ಗುರುತಿಸಲಾಗಿದೆ.

ಬೈಂದೂರು ಠಾಣಾ ವ್ಯಾಪ್ತಿಯ ಎಳಜಿತ್ನಲ್ಲಿ ನ ಸದೆಯಮ್ಮ ಗೌಡ್ತಿ ಅವರ ಮನೆಯಿಂದ 2 ದನ ಹಾಗೂ ಪಕ್ಕದ ಮನೆಯ ಕೊಟ್ಟಿಗೆಯಲ್ಲಿದ್ದ 3 ದನಕರುಗಳನ್ನು ಕದ್ದೊಯ್ಯಲಾಗಿತ್ತು. ಜಾನುವಾರು ಕಳವು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗಿತ್ತು.

ಈ ನಡುವೆ ಕದ್ದೊಯ್ದ ದನಗಳನ್ನು ಬೈಂದೂರು ಪೊಲೀಸರು ಕಂಡ್ಲೂರು ಬಳಿಯ ನದೀಮ್ ಎನ್ನುವವರ ಜಾಗದಿಂದ ಪತ್ತೆ ಹಚ್ಚಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಆರೋಪಿ ಮೊಹಮ್ಮದ್ಅ ಝೀಮ್ ಎನ್ನುವವನನ್ನು ಬಂಧಿಸಿದ್ದು ಇನ್ನಷ್ಟು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love

Exit mobile version