Home Mangalorean News Kannada News ಬೈಕ್ -ಟಿಪ್ಪರ್ ಡಿಕ್ಕಿ, ಯುವಕನ ಬಲಿ

ಬೈಕ್ -ಟಿಪ್ಪರ್ ಡಿಕ್ಕಿ, ಯುವಕನ ಬಲಿ

Spread the love

ಬೈಕ್ -ಟಿಪ್ಪರ್ ಡಿಕ್ಕಿ, ಯುವಕನ ಬಲಿ
ಮಂಗಳೂರು: ಬೈಕಿಗೆ ಹಿಂದಿನಿಂದ ಟಿಪ್ಪರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ನಗರದ ಹೊರವಲಯದ ಗಂಜಿಮಠದಲ್ಲಿ ಗುರುವಾರ ನಡೆದಿದೆ.

ಮೃತರನ್ನು ಕಿನ್ನಿಗೋಳಿ ಸಮೀಪದ ಶಿರ್ತಾಡಿ ರಾಮಣ್ಣ ಪೂಜಾರಿ ಅವರ ಪುತ್ರ ಸಂತೋಷ್ ಪೂಜಾರಿ (25) ಎಂದು ಗುರುತಿಸಲಾಗಿದೆ.

santhosh-shirthadi-mangalorean-com1

ಸಂತೋಷ್ ಪೂಜಾರಿ ಗಂಜಿಮಠ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ, ಘಟನೆಯ ಬಳಿಕ ಟಿಪ್ಪರ್ ಚಾಲಕ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆಯ ಕುರಿತು ಬಜ್ಪೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.


Spread the love

Exit mobile version