Home Mangalorean News Kannada News ಬೈಕ್ ಟ್ಯಾಂಕರ್ ಡಿಕ್ಕಿ ; ಬೈಕ್ ಸವಾರ ದಾರುಣ ಸಾವು

ಬೈಕ್ ಟ್ಯಾಂಕರ್ ಡಿಕ್ಕಿ ; ಬೈಕ್ ಸವಾರ ದಾರುಣ ಸಾವು

Spread the love

ಬೈಕ್ ಟ್ಯಾಂಕರ್ ಡಿಕ್ಕಿ ; ಬೈಕ್ ಸವಾರ ದಾರುಣ ಸಾವು

ಮಂಗಳೂರು: ಬೈಕ್ ಹಾಗೂ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನಪ್ಪಿದ ಘಟನೆ ನಗರದ ಎ ಜೆ ಆಸ್ಪತ್ರೆಯ ಬಳಿ ನಡೆದಿದೆ.

ಮೃತರನ್ನು ಸುರತ್ಕಲ್ ನಿವಾಸಿ ಸದಾನಂದ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಚಲಿಸುತ್ತಿದ್ದ ಬೈಕಿಗೆ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಫಘಾತದ ರಭಸಕ್ಕೆ ಬೈಕ್ ಸವಾರನ ದೇಹ ಸಂಪೂರ್ಣ ಛಿದ್ರಗೊಂಡಿದೆ.
ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version