Home Mangalorean News Kannada News ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ : ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮ

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ : ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮ

Spread the love

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ : ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮ

ಉಡುಪಿ: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮವು ದೀಪ ಬೆಳಗಿಸುವುದರ ಮೂಲಕ ನಡೆಯಿತು.

ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರವನ್ನು ಅಳವಿಡಿಸಿದ್ದ ಬೃಹತ್ ಟಿವಿ ಪರದೆಯಲ್ಲಿ ಲೈವ್ ವೀಕ್ಷಣೆ ಮಾಡುವ ಮೂಲಕ ಪ್ರದಗ್ರಹಣ ಸಮಾರಂಭವನ್ನು ಸಾಕ್ಷಿಕರಿಲಾಯಿತು. ಈ ವೇಳೆ ನಾಯಕರು ದೀಪ ಬೆಳಗಿಸುವ ಮೂಲಕ ಜಿಲ್ಲೆಯಲ್ಲಿ ಚಾಲನೆ ನೀಡಿದರು. ಅಲ್ಲದೆ ಸಂವಿಧಾನದ ಪೀಠಿಕೆಯ ಮೇಲೆ ಪ್ರಮಾಣವಚನ ಹಾಗೂ ಕಾಂಗ್ರೆಸ್ ಪಕ್ಷದ ಧ್ಯೇಯಗಳ ಮೇಲೆ ಪ್ರತಿಜ್ಞೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಪ್ರಖ್ಯಾತ್ ಶೆಟ್ಟಿ ಅವರ ಉಸ್ತುವಾರಿಯಲ್ಲಿ ಬ್ಲಾಕಿನ ಎಲ್ಲಾ ಗ್ರಾಮಗಳಲ್ಲಿ ಕೂಡ ಡಿ ಕೆ ಶಿವಕುಮಾರ್ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮವು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ.

ಕಾರ್ಯಕ್ರಮದಲ್ಲಿ ಕೆಪಿಸಿಸಿ ವೀಕ್ಷರಾದ ಸತೀಶ್ ಎಚ್ ಎನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ, ನಾಯಕರಾದ ಸರಸ್ವತಿ ವಿ ನಾಯಕ್, ನವೀನ್ ಚಂದ್ರ ನಾಯಕ್, ನಿತ್ಯಾನಂದ ಬಿ ಆರ್, ಎಸ್ ನಾರಾಯಣ್, ಸದಾಶಿವ ನಾಯಕ್, ಸೂರ್ಯ ಸಾಲಿಯಾನ್, ಶಂಕರ್ ನಾಯಕ್, ಮಹೇಶ್ ಮೊಯ್ಲಿ, ತಾಝುದ್ದೀನ್, ಕಿಶೋರ್ ಹೆಗ್ಡೆ, ಹರೀಶ್ ಚಂದ್ರ, ಶಂಕರ್ ಪೂಜಾರಿ, ಚಂದ್ರಾವತಿ, ದೇವಕಿ, ರಾಜು ಸಾಲ್ಯಾನ್, ರವಿ ಪ್ರಕಾಶ್ ಹಾಗೂ ಇತರರು ಉಪಸ್ಥಿರಿದ್ದರು.


Spread the love

Exit mobile version