ಮಂಗಳೂರಿನಲ್ಲಿ ಬಿಪಿಸಿಎಲ್ನ ‘ಭಾರತ್ಗ್ಯಾಸ್ ಲೈಟ್ ಜಿಪ್’ ಶುಭಾರಂಭ: ತಕ್ಷಣದ ಹೊಸ ಸಾಗಣೆ ಮತ್ತು ಕ್ಷಿಪ್ರ ಡೆಲಿವರಿಯೊಂದಿಗೆ ಭಾರತದ ಪ್ರೀಮಿಯಂ ಎಲ್ಪಿಜಿ ಸೇವೆ
ಮಂಗಳೂರು : ಭಾರತದ ಪ್ರಮುಖ ಇಂಧನ ಕಂಪನಿಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಮಂಗಳೂರಿನಲ್ಲಿ ತಕ್ಷಣದ ನೂತನ ಸಂಪರ್ಕ (ಇನ್ಸ್ಟಂಟ್ ನ್ಯೂ ಕನೆಕ್ಷನ್) ಮತ್ತು ಎಕ್ಸ್ಪ್ರೆಸ್ ಡೆಲಿವರಿಯ ಮೂಲಕ ಗ್ರಾಹಕರ ಅನುಭವವನ್ನು ಹೊಸದಾಗಿ ವ್ಯಾಖ್ಯಾನಿಸಲು ‘ಭಾರತ್ಗ್ಯಾಸ್ ಲೈಟ್ ಜಿಪ್’ ಎಂಬ ಪ್ರೀಮಿಯಂ ಫ್ರೀ ಟ್ರೇಡ್ ಎಲ್ಪಿಜಿ (ಎಫ್ಟಿಎಲ್) ಸೇವೆಯನ್ನು ಇಂದಿಲ್ಲಿ ಬಿಡುಗಡೆಗೊಳಿಸಿದೆ. ‘ಭಾರತ್ಗ್ಯಾಸ್ ಲೈಟ್ ಜಿಪ್’ ಬಿಪಿಸಿಎಲ್ನ ಮುಂದಿನ ಪೀಳಿಗೆಯ ಗ್ರಾಹಕ ಕೇಂದ್ರಿತ ಎಲ್ಪಿಜಿ ಪರಿಹಾರವನ್ನು ಪ್ರತಿನಿಧಿಸುತ್ತದೆ. ಇದು ಹಗುರವಾದ ಕಂಪೋಸಿಟ್ ಭಾರತ್ಗ್ಯಾಸ್ ಲೈಟ್ ಸಿಲಿಂಡರ್ನ ಪ್ರಯೋಜನಗಳೊಂದಿಗೆ ವೇಗ, ಅನುಕೂಲತೆ ಮತ್ತು ಸುಧಾರಿತ ಗ್ರಾಹಕ ಸೇವೆಗೆ ಒತ್ತು ನೀಡುವ ಡಿಜಿಟಲ್ ತಂತ್ರಜ್ಞಾನ ಆಧಾರಿತ ಸೇವೆಯಾಗಿದೆ.

ತಕ್ಷಣದ ನೋಂದಣಿ ಮತ್ತು ಎಕ್ಸ್ಪ್ರೆಸ್ ಡೆಲಿವರಿ ಸೌಲಭ್ಯ ಒದಗಿಸುವ ಮೂಲಕ ಭವಿಷ್ಯಕ್ಕೆ ಸಜ್ಜಾಗಿರುವ ಎಲ್ಪಿಜಿ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಪಯಣದಲ್ಲಿ ‘ಭಾರತ್ಗ್ಯಾಸ್ ಲೈಟ್ ಜಿಪ್’ ಒಂದು ಪ್ರಮುಖ ಹೆಜ್ಜೆಯಾಗಿದೆ. ಗ್ರಾಹಕರ ದೈನಂದಿನ ಜೀವನವನ್ನು ಸುಲಭಗೊಳಿಸುವ ಮತ್ತು ಸ್ಮಾರ್ಟ್ ಹಾಗೂ ತಂತ್ರಜ್ಞಾನ ಆಧಾರಿತ ಇಂಧನ ಪರಿಹಾರಗಳನ್ನು ತಲುಪಿಸುವ ಬಿಪಿಸಿಎಲ್ ಬದ್ಧತೆಗೆ ಈ ಬಿಡುಗಡೆ ಸಾಕ್ಷಿಯಾಗಿದೆ. ಎಲ್ಪಿಜಿ ಸೇವೆಗಳನ್ನು ಹೆಚ್ಚು ಆಧುನಿಕ, ಸುಲಭ ಲಭ್ಯ ಹಾಗೂ ವೈಯಕ್ತಿಕಗೊಳಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ.
ಇದು ವೇಗ, ಸುಲಭ ನಿರ್ವಹಣೆ ಹಾಗೂ ಆಧುನಿಕ ಸೇವಾ ಮಾನದಂಡಗಳಿಗೆ ಆದ್ಯತೆ ನೀಡುವ ಗ್ರಾಹಕರಿಗಾಗಿ ವಿಶೇಷವಾಗಿ ರೂಪುಗೊಂಡಿದೆ. ಈ ಸೇವೆಯು ಎರಡು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ: ಸರಳೀಕೃತ ಪ್ರಕ್ರಿಯೆಯ ಮೂಲಕ ತಕ್ಷಣವೇ ಹೊಸ ಎಲ್ಪಿಜಿ ಸಂಪರ್ಕ ಪಡೆಯುವುದು ಹಾಗೂ ಬುಕಿಂಗ್ ಮಾಡಿದ ಕೇವಲ ೪ ಗಂಟೆಗಳ ಒಳಗೆ ಮನೆಬಾಗಿಲಿಗೆ ಗ್ಯಾಸ್ ಸಿಲಿಂಡರ್ ತಲುಪಿಸುವ ಎಕ್ಸ್ಪ್ರೆಸ್ ಡೆಲಿವರಿ. ಇದರೊಂದಿಗೆ ಭಾರತ್ಗ್ಯಾಸ್ ಲೈಟ್ ಕಂಪೋಸಿಟ್ ಸಿಲಿಂಡರ್ ಸುಲಭವಾಗಿ ಎತ್ತಿಡಲು ಅನುಕೂಲಕರವಾದ ಹಗುರ ವಿನ್ಯಾಸ, ತುಕ್ಕು ಹಿಡಿಯದ ಕಂಪೋಸಿಟ್ ಬಾಡಿ, ಗ್ಯಾಸ್ ಮಟ್ಟವನ್ನು ಹೊರಗಿನಿಂದಲೇ ನೋಡಬಹುದಾದ ಪಾರದರ್ಶಕ ವಿನ್ಯಾಸ, ವರ್ಧಿತ ಸುರಕ್ಷತೆ, ಆಧುನಿಕ ನೋಟ ಮತ್ತು ಬಳಕೆಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತದೆ.
ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಸುಲಭ ಹಾಗೂ ನಂಬಿಕಸ್ಥ ಸೇವೆಯನ್ನು ಬಯಸುವ ಆಧುನಿಕ ಭಾರತದ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಇಂದಿನಿಂದ ‘ಭಾರತ್ಗ್ಯಾಸ್ ಲೈಟ್ ಜಿಪ್’ ಸೇವೆಯನ್ನು ದೇಶದ ೩೦ ನಗರಗಳಲ್ಲಿ ಆರಂಭಿಸಲಾಗಿದೆ. ಆಗಸ್ಟ್ ೧೫, ೨೦೨೬ ರ ವೇಳೆಗೆ ೨೪ ರಾಜ್ಯಗಳ ಹೆಚ್ಚುವರಿ ೭೦ ನಗರಗಳಿಗೆ ವಿಸ್ತರಿಸಿ, ಒಟ್ಟು ೧೦೦ ನಗರಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ತದನಂತರ ದೇಶದ ಎಲ್ಲಾ ಪ್ರಮುಖ ನಗರಗಳಿಗೂ ಈ ಪ್ರೀಮಿಯಂ ಸೇವೆಯನ್ನು ವಿಸ್ತರಿಸಲಾಗುವುದು.
ಮಂಗಳೂರಿನ ‘ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್’ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ 10 ಕೆಜಿ ಫೈಬರ್ ಕಂಪೋಸಿಟ್ ಎಲ್ಪಿಜಿ ಸಿಲಿಂಡರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಕಾಮಧೇನು ಗ್ಯಾಸ್ ಏಜೆನ್ಸಿ ಜಂಟಿಯಾಗಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ಬಿಪಿಸಿಎಲ್ ಅಧಿಕಾರಿಗಳು ಹಾಗೂ 50 ಕ್ಕೂ ಹೆಚ್ಚು ಸಾರ್ವಜನಿಕರ ಸಮ್ಮುಖದಲ್ಲಿ ಮೊದಲ ಹಂತವಾಗಿ 15 ಮಂದಿ ಗ್ರಾಹಕರಿಗೆ ಸಿಲಿಂಡರ್ಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್ ಗ್ಯಾಸ್ ಮಂಗಳೂರು ಎಲ್ಪಿಜಿ ಟೆರಿಟರಿ ಮ್ಯಾನೇಜರ್ ಶ್ರೀ ಸಂದೀಪ್ ಕುಮಾರ್ ರೈನಾ, ಗ್ರಾಹಕರ ಅನುಕೂಲತೆಗೆ ತಂತ್ರಜ್ಞಾನ ಆಧಾರಿತ ಸೇವೆಯನ್ನು ನೀಡುವುದೇ ಸಂಸ್ಥೆಯ ಆದ್ಯತೆ ಎಂದರು. ಸಮಾರಂಭದಲ್ಲಿ ಭಾರತ್ ಗ್ಯಾಸ್ ಸೇಲ್ಸ್ ಮ್ಯಾನೇಜರ್ ಶ್ರೀ ದರ್ಶಿತ ಮಾಳವಿಯ, ನಿವೃತ್ತ ಆರ್ಟಿಒ ಶ್ರೀ ರವಿಶಂಕರ್, ಕಾಮಧೇನು ಗ್ಯಾಸ್ ಏಜೆನ್ಸಿ ವಿತರಕರಾದ ಶ್ರೀ ದಿನೇಶ್ ಕುಮಾರ್ ಶೆಟ್ಟಿ, ಹಾಗೂ ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ನ ಶ್ರೀಮತಿ ಅಮೃತ ಮತ್ತು ಶ್ರೀ ಸುರೇಶ್ ಕುಮಾರ್ ಭಾಗವಹಿಸಿದ್ದರು. ಗ್ಯಾನ್ ಇವೆಂಟ್ಸ್ ಮಂಗಳೂರಿನ ಶ್ರೀ ಗಣೇಶ್ ಪ್ರಸಾದ್ ಕೆ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.