Home Mangalorean News Kannada News ಮಂಗಳೂರಿನ ಯುವಕ ಉಡುಪಿಯಿಂದ ಕಾಣೆ; ದೂರು ದಾಖಲು

ಮಂಗಳೂರಿನ ಯುವಕ ಉಡುಪಿಯಿಂದ ಕಾಣೆ; ದೂರು ದಾಖಲು

Spread the love

ಮಂಗಳೂರಿನ ಯುವಕ ಉಡುಪಿಯಿಂದ ಕಾಣೆ; ದೂರು ದಾಖಲು

ಮಂಗಳೂರು: ಮಂಗಳೂರು ಮೂಲದ ಯುವಕನೊರ್ವ ಉಡುಪಿಯ ತನ್ನ ದೊಡ್ಡಮ್ಮನ ಮನೆಯಿಂದ ಏಪ್ರಿಲ್ 24ರಿಂದ ಕಾಣೆಯಾದ ಕುರಿತು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ಯುವಕನನ್ನು ಮಂಗಳೂರು ಹೊಸಗದ್ದೆ ಕೇರಿ ನಿವಾಸಿ ಕೆ ಮಧುಕರ ಶೆಟ್ ಅವರ ಮಗ ಅಕ್ಷಯ ಎಂ ಶೇಟ್ ಎಂದು ಗುರುತಿಸಲಾಗಿದೆ.

ತನ್ನ ಮಗ ಕಾಣೆಯಾದ ಕುರಿತು ತಂದೆಕೆ ಮಧುಕರ ಶೆಟ್ ಉಡುಪಿ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತನ್ನ ಮಗ ಅಕ್ಷಯ ಎಂ ಶೇಟ್ (21) ಎಂಬುವವರು ದಿನಾಂಕ 24/04/2017 ರಂದು ಉಡುಪಿಯ ಬನ್ನಂಜೆಯಲ್ಲಿರುವ ಡೊಡ್ಡಮ್ಮ ಪ್ರೇಮರವರ ಮನೆಗೆ ಬಂದಿದ್ದು ದಿನಾಂಕ 25/04/2017 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-4763 ನಲ್ಲಿ ಸಂಜೆ 6:30 ಗಂಟೆಗೆ ಮನೆಯಿಂದ ಹೋದವರು ಈ ವರೆಗೂ ಮನೆಗೆ ಬಂದಿರುವುದಿಲ್ಲಿ ಅವರ ಮೊಬೈಲ್ ಕರೆ ಮಾಡಿದಾಗ ಸ್ವಚ್ಡ್ ಆಫ್ ಆಗಿದ್ದು ಅವರ ಬಗ್ಗೆ ಸಂಬಂಧಿಕರ ಮತ್ತು ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಈ ವರೆಗೆ ಯಾವುದೇ ಮಾಹಿತಿ ದೊರಕಿರುವುದಿಲ್ಲ ಎಂದು ತಿಳಿಸಿದ್ದಾರೆ.

ಉಡುಪಿ ನಗರ ಠಾಣೆಯ ಪೋಲಿಸರು ದೂರನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love

Exit mobile version