ಮಂಗಳೂರು: ಇನ್ಫೋಸಿಸ್ ಉದ್ಯೋಗಿ ಹೃದಯಾಘಾತದಿಂದ ನಿಧನ
ಮಂಗಳೂರು: ಅಡ್ಯಾರ್ ಕಣ್ಣೂರು ಗಾಣದಬೆಟ್ಟು ನಿವಾಸಿ ಮುಹಮ್ಮದ್ ಹಾಶೀರ್ (32) ರವರು ಇಂದು ಬೆಳಿಗ್ಗೆ ಕೇರಳದ ವಯನಾಡ್ ನಲ್ಲಿ ಹೃದಯಾಘಾತದಿಂದ ನಿಧನರಾದರು.
ಕೇರಳದ ವಯನಾಡ್ ನಲ್ಲಿ ಇನ್ಫೋಸಿಸ್ ನ ಉದ್ಯೋಗಿಯಾಗಿದ್ದ ಮುಹಮ್ಮದ್ ಹಾಶೀರ್ ಅವರು ಮಂಗಳೂರಿನ ಪ್ರಕಾಶ್ ಬೀಡಿ ಉದ್ಯಮಿ G.B. ಹಸನಬ್ಬ (G.B. ಬಾವ) ಹಾಗೂ ಮುಲಾರಪಟ್ಣ ಮರ್ಹೂಮ್ ಹಸನ್ ಮುಸ್ಲಿಯಾರ್ ಅವರ ಮಗಳ ಹಿರಿಯ ಮಗ.
ಮೃತರು ಪತ್ನಿ, ಒಂದು ವರ್ಷದ ಹೆಣ್ಣು ಮಗು ಮತ್ತು ತಂದೆ ,ತಾಯಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.