Home Mangalorean News Kannada News ಮಂಗಳೂರು: ಕಟೀಲಿನಲ್ಲಿ ಬಸ್ಸು ಮಗುಚಿ ಬಿದ್ದು 12 ಮಂದಿಗೆ ಗಾಯ

ಮಂಗಳೂರು: ಕಟೀಲಿನಲ್ಲಿ ಬಸ್ಸು ಮಗುಚಿ ಬಿದ್ದು 12 ಮಂದಿಗೆ ಗಾಯ

Spread the love

ಮಂಗಳೂರು: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸುಮಾರು 12 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಕಟೀಲು ಚರ್ಚಿನ ಸಮೀಪ ಗುರುವಾರ ಸಂಭವಿಸಿದೆ.

ಮಂಗಳೂರಿನಿಂದ ಕಿನ್ನಿಗೋಳಿಗೆ ತೆರಳುತ್ತಿದ್ದ ಬಸ್ಸು, ಕಟೀಲು ಚರ್ಚಿನ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಮುಕ್ಕ ಹಾಗೂ ಕಿನ್ನಿಗೋಳಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡ ವ್ಯಕ್ತಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದ್ದು, ಸ್ಥಳಕ್ಕೆ ಬಜ್ಪೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version