Home Mangalorean News Kannada News ಮಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಮನೆಗೆ ಎಸಿಬಿ ದಾಳಿ

ಮಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಮನೆಗೆ ಎಸಿಬಿ ದಾಳಿ

Spread the love

ಮಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಮನೆಗೆ ಎಸಿಬಿ ದಾಳಿ

ಮಂಗಳೂರು: ಆದಾಯಕ್ಕಿಂತ ಅಧಿಕ ಆದಾಯ ಹೊಂದಿದ ಆರೋಪದ ಹಿನ್ನಲೆಯಲ್ಲಿ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಎಸ್. ಮಹದೇವಪ್ಪ ಅವರ ಕಚೇರಿ ಹಾಗೂ ಮನೆಗಳ ಮೇಲೆ ಬುಧವಾರ ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಹದೇವಪ್ಪ ಅವರ ಮಂಗಳೂರು, ಬೆಂಗಳೂರು, ಚಿತ್ರದುರ್ಗದ ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ಈ ದಾಳಿ ನಡೆದಿದೆ

ದಾಳಿ ಮಾಡಿದ ವೇಳೆಯಲ್ಲಿ 5 ನಿವೇಶನ ಮತ್ತು ಚಿಕ್ಕಮಗಳೂರಿನ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 18 ಎಕ್ರೆ ಕೃಷಿ ಜಮೀನು, ಒಟ್ಟು ನಗದು 3,11,355/- ವಿದೇಶಿ ಹಣ ಯುಎಸ್ ಡಾಲರ್ 2150, ಹಾಂಗ್ಕಾಂಗ್ ಡಾಲರ್ 4,800/- ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 6,49,700/- ಎಫ್ಡಿ ಖಾತೆ 12,00,000/- ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಎಲ್ಐಸಿ ಪಾಲಿಸಿಗಳು ದೊರಕಿರುತ್ತದೆ, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.


Spread the love

Exit mobile version