ಮಂಗಳೂರು ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಹಕ ಮಾಹಿತಿ
ಮಂಗಳೂರಿನ ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಪ್ರಿಲ್ 18 ರಂದು ಗ್ರಾಹಕ ಸರ್ಟಿಫಿಕೇಟ್ ಕೋರ್ಸ ನ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿ ಕಾರ್ಯಕ್ರಮ ನಡೆಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಗ್ರಾಹಕ ಶಿಕ್ಷಣ ರಾಜ್ಯ ಸಂಪನ್ಮೂಲ ವ್ಯಕ್ತಿ , ಕಾರ್ಯನಿರತ ಪತ್ರಕರ್ತ ರಾಯಿ ರಾಜ ಕುಮಾರ ಮೂಡುಬಿದಿರೆಯವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅವರು ತಮ್ಮ ಭಾಷಣದಲ್ಲಿ ಬ್ಯಾಂಕಿಂಗ್, ಇನ್ಶೂರೆನ್ಸ್ ಗಳಿಂದ ನಡೆಯುವ ದೋಷಗಳಿಗೆ ಪರಿಹಾರದ ಮಾರ್ಗೋಪಾಯ, ದಾರಿ ತಪ್ಪಿಸುವ ಜಾಹೀರಾತುಗಳ ಸತ್ಯ ಅರಿತುಕೊಳ್ಳುವ ಅಗತ್ಯ, ಸುರಕ್ಷಿತ ಆಹಾರಕ್ಕಾಗಿ ವಹಿಸಬೇಕಾದ ಜಾಗರೂಕತೆ ಗಳು, ತೂಕ-ಅಳತೆಯನ್ನು ಪುನರಪಿ ಅಳೆಯುವ ಅಗತ್ಯ ಇತ್ಯಾದಿ ಹಲವಾರು ವಿಷಯಗಳ ಸವಿಸ್ತಾರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಇತರರಿಗೂ ತಿಳಿ ಹೇಳುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.
ಕಾಲೇಜಿನ ಪ್ರಾಚಾರ್ಯ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಹಕ ಸಂಘದ ನಿರ್ದೇಶಕಿ ಮಂಜುಳಾ ಮಲ್ಯ ವೇದಿಕೆಯಲ್ಲಿ ಹಾಜರಿದ್ದರು.
ಸಂಘದ ಕಾರ್ಯದರ್ಶಿ ಶೋಭಾ ರಾಣಿ ಸ್ವಾಗತಿಸಿ ವಂದಿಸಿದರು.
