Home Mangalorean News Kannada News ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಶಾರದಾ ಉತ್ಸವ ಸಮಾಪನ

ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಶಾರದಾ ಉತ್ಸವ ಸಮಾಪನ

Spread the love

ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಶಾರದಾ ಉತ್ಸವ ಸಮಾಪನ

ಮಂಗಳೂರು : ಜಿಲ್ಲೆಯ ಹೆಸರಾಂತ ಉತ್ಸವಗಳಲ್ಲಿ ಅತೀ ಪ್ರಸಿದ್ದವಾದ ಸಾರ್ವಜನಿಕ ಮಂಗಳೂರು ಶಾರದಾ ಮಹೋತ್ಸವದ 97 ನೇ ವರ್ಷದ ಕಾರ್ಯಕ್ರಮಗಳನ್ನು ಎಂದಿನಂತೆ ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠ ದ ವಸಂತ ಮಂಟಪದಲ್ಲಿ ಸಕಲ ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ಶ್ರೀ ಶಾರದಾ ಮಾತೆಯ ವಿಗ್ರಹದ ಪ್ರತಿಷ್ಠಾಪನೆ ನೆರವೇರಿತು .

ಮೂಲಾ ನಕ್ಷತ್ರದ ಮೊದಲ ಪಾದದಲ್ಲಿ ಪ್ರತಿಷ್ಠಾಪನೆಗೊಂಡು 9 ದಿನಗಳ ಪರ್ಯಂತ ಶ್ರೀ ದೇವಳದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹಕ್ಕೆ ವಿವಿಧ ಅವತಾರಗಳ ಅಲಂಕಾರದೊಂದಿಗೆ ಅಲಂಕರಿಸಿ ಪೂಜಿಸಲಾಯಿತು . ಮಲ್ಲಿಗೆ ಜಡೆಯೊಂದಿಗೆ ಸರ್ವಾಭರಣ ಭೂಷಿತಳಾಗಿ ಸಾಕ್ಷಾತ್ ದೇವಿಯಂತೆ ಶೋಭಿಸಿ ಭಕ್ತರಿಗೆ ಭಾವುಕತೆ ಹಾಗೂ ಸಂತೋಷದ ಮೆರುಗನ್ನು ನೀಡುವ ವೈಶಿಷ್ಟ್ಯವನ್ನು ಕಾಣಬಹುದು . ಉತ್ಸವ ಸಾರ್ವಜನಿಕವಾಗಿ ಆರಂಭಗೊಂಡು ಪ್ರಸ್ತುತ 97 ನೇ ಶಾರದಾ ಉತ್ಸವ ವೈಭವ ವಾಗಿ ನಡೆಯುತ್ತಿದ್ದು ಮಂಗಳೂರಿನಲ್ಲಿ ಆರಂಭಗೊಂಡ ಪ್ರಥಮ ಶಾರದಾ ಉತ್ಸವ ಎಂಬ ಕೀರ್ತಿಯೂ ಇದೆ

ಮಂಗಳೂರು ಶಾರದೆಯ ಮತ್ತೊಂದು ವೈಶಿಷ್ಟ್ಯವೆಂದರೆ ಶಾರದಾ ಮಾತೆ ಯ ಶೋಭಾಯಾತ್ರೆ . ಶ್ರೀ ದೇವಿಯ ಉತ್ಸವ ಸ್ಥಾನದಿಂದ ಹೊರಟು ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ನಂತರ ಪುಷ್ಪದಿಂದ ಅಲಂಕೃತ ಪಲ್ಲಕಿಯಲ್ಲಿ ವಿರಾಜಮಾನಳಾಗಿ ಭಕ್ತರು ಆ ಲಾಲಕಿಯನ್ನು ತಮ್ಮ ಭುಜದಲ್ಲಿರಿಸಿ ಶೋಭಾಯಾತ್ರೆ ಯುದ್ದಕ್ಕೂ ಕೊಂಡೊಯ್ಯುವ ದ್ರಶ್ಯ ಅತ್ಯಂತ ಮನೋಹರ , ಶೋಭಾಯಾತ್ರೆಯ ಸಾಗುವ ದಾರಿಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಿ , ಆಕರ್ಷಕ ಸುಡುಮದ್ದು ಪ್ರದರ್ಶನ , ವಿವಿಧ ಟ್ಯಾಬ್ಲೋ ಗಳು , ವಾದ್ಯ , ಆಕರ್ಷಕ ಶಾರದಾ ಹುಲಿಗಳ ಕುಣಿತ ನಡೆದವು . ಇಲ್ಲಿ ವೇಷ ಹಾಕಿದ ತಂಡಗಳಿಗೆ ವಿಶೇಷ ಮರ್ಯಾದೆ ನೀಡುವ ಸಂಪ್ರದಾಯ ಮಂಗಳೂರು ಶಾರದೆಯ ಆಕರ್ಷಣೆಯೇ ಹುಲಿವೇಷ . ಲಾಲಕಿಯಲ್ಲಿ ವಿರಾಜಮಾನಳಾದ ಶಾರದೆಯ ನ್ನು ವೀಕ್ಷಿಸಲು ಮೆರವಣಿಗೆ ಸಾಗುವ ರಸ್ತೆಯ ಎರಡು ಭಾಗಗಳಲ್ಲಿ ಸಹಸ್ರಾರು ಭಕ್ತಾದಿಗಳು ನೆರೆದಿದ್ದರು .

ಶೋಭಾಯಾತ್ರೆಯು ರಥಬೀದಿ , ಗದ್ದೆಕೇರಿ , ಡೊಂಗರಕೇರಿ , ನ್ಯೂಚಿತ್ರ ಜುಂಕ್ಷನ್ , ಚಾಮರಗಲ್ಲಿ , ಕೆಳ ರಥಬೀದಿ ಮುಖಾಂತರ ಮಹಾಮಾಯ ದೇವಳದ ಪುಷ್ಕರಣಿಯಲ್ಲಿ ಮಾತೆಯ ವಿಗ್ರಹವನ್ನು ಜಲ ಸ್ಥ ೦ಭನ ಗೊಳಿಸಲಾಯಿತು . ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಡಾ . ಯು . ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ , ದೇವಳದ ಮೊಕ್ತೇಸರರಾದ ಸಿ .ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಹಾಗೂ ನೂರಾರು ಗಣ್ಯರು ಉಪಸ್ಥಿತರಿದ್ದರು .


Spread the love

Exit mobile version