ಮಂಗಳೂರು: ವಿಚ್ಛೇದನಕ್ಕೆ ಬಂದವರನ್ನು ಒಗ್ಗೂಡಿಸಿದ ಲೋಕ ಅದಾಲತ್
ಮಂಗಳೂರು: ದ.ಕ.ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ವಿಚ್ಛೇದನಕಕೆ ಮುಂದಾಗಿದ್ದ ದಂಪತಿಯನ್ನು ಒಗ್ಗೂಡಿಸಿದ ಅಪರೂಪದ ಘಟನೆ ನಡೆಯಿತು.
ಹರೀಶ್-ಶಶಿಕಲಾ ದಂಪತಿಯು ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಮೂಲಕ ಸರಿಪಡಿಸಲು ಪ್ರಯತ್ನಿಸಿ ಗಂಡ ಹೆಂಡತಿಯ ಮಧ್ಯೆ ಸಂಧಾನ ನಡೆಸಲಾಯಿತು. ಹಾಗೇ ದಂಪತಿಯು ಮತ್ತೆ ಒಗ್ಗೂಡಿ ಸಂಸಾರ ಸಾಗಿಸಲು ಒಪ್ಪಿದ್ದರು.
ಅದರಂತೆ ಶನಿವಾರ ಲೋಕ ಅದಾಲತ್ಗೆ ಆಗಮಿಸಿದ್ದ ಹರೀಶ್-ಶಶಿಕಲಾ ದಂಪತಿಯು ಪ್ರಧಾನ ಜಿಲ್ಲಾ ನ್ಯಾಯಾ ಧೀಶ ಬಸವರಾಜ ಅವರ ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮೂಲಕ ಒಗ್ಗೂಡಿದರು.
ಈ ಸಂದರ್ಭ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ನ್ಯಾಯಾವಾದಿಳು ಉಪಸ್ಥಿತರಿದ್ದರು.