Home Mangalorean News Kannada News ಮಂಗಳೂರು: ಸೇತುವೆಯಿಂದ ನದಿಗೆ ಉರುಳಿದ ಕಾರು ಇಬ್ಬರು ವಿದ್ಯಾರ್ಥಿಗಳ ಸಾವು

ಮಂಗಳೂರು: ಸೇತುವೆಯಿಂದ ನದಿಗೆ ಉರುಳಿದ ಕಾರು ಇಬ್ಬರು ವಿದ್ಯಾರ್ಥಿಗಳ ಸಾವು

Spread the love

ಮಂಗಳೂರು: ಸೇತುವೆಯಿಂದ ಕಾರೊಂದು ಕೂಳೂರು ನದಿಗೆ ಉರುಳಿ ಬಿದ್ದ ಪರಿಣಾಮ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.
ಮೃತಪಟ್ಟ ವಿದ್ಯಾರ್ಥಿಗಳು ಬಂದರ್‌ನಲ್ಲಿನ  ವ್ಯಾಪಾರಿ, ಫ‌ಳ್ನೀರ್‌ ನಿವಾಸಿ ಮಹಮ್ಮದ್‌ ರಫೀಕ್‌ ಅವರ ಪುತ್ರ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ತೌಶೀಲ್‌  (21) ಎಂದು ಸ್ಥಳದಲ್ಲಿ ದೊರಕಿದ ದಾಖಲೆಯ ಆಧಾರದಲ್ಲಿ ಗುರುತಿಸಲಾಗಿದೆ. ಜತೆಯಲ್ಲಿದ್ದ ಯುವತಿ ಕಾರವಾರದ ಪ್ರಿಣೀತಾ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

11217819_727133810724187_3711625577527230671_n

ಮೂಲಗಳ ಪ್ರಕಾರ ವಿದ್ಯಾರ್ಥಿಗಳು ಬೀಚಿಗೆ ತೆರಳುತ್ತಿದ್ದು, ಕಾರಿನ ಚಾಲಕ ಮತ್ತೊಂದು ವಾಹನವನ್ನು ಒವರ್ಟೇಕ್ ಮಾಡಲು ಹೋಗುವ ವೇಳೆ ನಿಯಂತ್ರಣ ತಪ್ಪಿ ಕೂಳೂರು ನದಿಗೆ ಕಾರು ಬಿದ್ದಿ ಪರಿಣಾಮ ಇಬ್ಬರೂ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಸಾರ್ವಜನಿಕರು, ಪೋಲಿಸರ ಸಹಾಯದಿಂದ ವಿದ್ಯಾರ್ಥಿಗಳ ಮೃತದೇಹಗಳನ್ನು ಮೇಲಕ್ಕೆತ್ತಿದ್ದು, ಪೋಸ್ಟ್ ಮಾರ್ಟಮ್ ನಡೆಸಲು ರವಾನಿಸಲಾಗಿದೆ.
ಪಣಂಬೂರು ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ


Spread the love

Exit mobile version