Home Mangalorean News Kannada News ಮರವೂರು ಸೇತುವೆ ಬಳಿ ಅಪಘಾತ: ಕಿನ್ನಿಪದವಿನ ಯುವಕ ಮೃತ್ಯು

ಮರವೂರು ಸೇತುವೆ ಬಳಿ ಅಪಘಾತ: ಕಿನ್ನಿಪದವಿನ ಯುವಕ ಮೃತ್ಯು

Spread the love

ಮರವೂರು ಸೇತುವೆ ಬಳಿ ಅಪಘಾತ: ಕಿನ್ನಿಪದವಿನ ಯುವಕ ಮೃತ್ಯು

ಬಜ್ಪೆ: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬಜ್ಪೆ ಮರವೂರು ಸೇತುವೆ ಸಮೀಪ ಬುಧವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಬಜ್ಪೆ ಸಮೀಪದ ಕಿನ್ನಿಪದವು ನಿವಾಸಿ ಅಕ್ಷಿತ್ ಪೂಜಾರಿ(24) ಎಂದು ಗುರುತಿಸಲಾಗಿದೆ.

ಇವರು ಚಲಾಯಿಸುತ್ತಿದ್ದ ಬೈಕ್ ಮರವೂರು ಸೇತುವೆ ಬಳಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಉರುಳಿಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಅಕ್ಷಿತ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version