Home Mangalorean News Kannada News ಮೀನುಗಾರಿಕೆಗೆ ತೆರಳಿದ್ದ ಯುವಕ ನೇತ್ರಾವತಿ ನದಿ ಪಾಲು

ಮೀನುಗಾರಿಕೆಗೆ ತೆರಳಿದ್ದ ಯುವಕ ನೇತ್ರಾವತಿ ನದಿ ಪಾಲು

Spread the love

ಮೀನುಗಾರಿಕೆಗೆ ತೆರಳಿದ್ದ ಯುವಕ ನೇತ್ರಾವತಿ ನದಿ ಪಾಲು

ಮಂಗಳೂರು: ಮೀನುಗಾರಿಕೆಗೆ ತೆರಳಿದ ಯುವಕನೋರ್ವ ನೇತ್ರಾವತಿ ನದಿ ಪಾಲಾದ ಘಟನೆ ಭಾನುವಾರ ಜರುಗಿದೆ.

ಮೃತ ಯುವಕನನ್ನು ಮೂಡಬಿದ್ರೆ ನಿವಾಸಿ ಜೊಯೆಲ್ ಡಿಸೋಜಾ (23) ಎಂದು ಗುರುತಿಸಲಾಗಿದೆ.

ಜೊಯೆಲ್ ಡಿಸೋಜಾ ತನ್ನ ಇತರ ಮೂವರು ಗೆಳೆಯರೊಂದಿಗೆ ನೇತ್ರಾವತಿ ಸೇತುವೆ ಬಳಿ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಆಯತಪ್ಪಿ ಜೊಯೆಲ್ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಮಾಹಿತಿ ಪಡೆದ ಸ್ಥಳಿಯರು ಜೋಯೆಲ್ ಅವರನ್ನು ಹುಡುಕಲು ಪ್ರಯತ್ನ ಪಟ್ಟಿದ್ದು ಆದರೆ ವಿಫಲರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿದ್ದು ಶೋಧ ಕಾರ್ಯ ಮುಂದುವರೆದಿದೆ.


Spread the love

Exit mobile version