Home Mangalorean News Kannada News ಮುಸುಕುದಾರಿ ತಂಡದಿಂದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷನ ಕೊಲೆ

ಮುಸುಕುದಾರಿ ತಂಡದಿಂದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷನ ಕೊಲೆ

Spread the love

ಮುಸುಕುದಾರಿ ತಂಡದಿಂದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷನ ಕೊಲೆ

ವಿಟ್ಲ:  ಬೈಕಿನಲ್ಲಿ ಬಂದ ನಾಲ್ವರು ಮುಸುಕುದಾರಿಗಳ ತಂಡವೊಂದು ಕರೋಪಾಡಿ ಗ್ರಾಮಪಂಚಾಯತು ಉಪಾಧ್ಯಕ್ಷ ಜಲೀಲ್ ಕರೋಪಾಡಿ ಅವರಿಗೆ ಮಾರಕಾಸ್ತ್ರಗಳಿಂದ ಧಾಳಿ ನಡೆಸಿ ಕೊಲೆ ಮಾಡಿದ ಘಟನೆ ಗುರುವಾರ ವಿಟ್ಲ ವ್ಯಾಪ್ತಿಯ ಕರೋಪಾಡಿಯಲ್ಲಿ ನಡೆದಿದೆ.

ಮೃತರು ತಾಲೂಕು ಪಂಚಾಯತಿಯ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿಯ ಪುತ್ರರಾಗಿದ್ದು, ಗುರುವಾರ ಬೆಳಿಗ್ಗೆ ಜಲೀಲ್ ಕರೋಪಾಡಿಯವರ ಮೇಲೆ ಪಂಚಾಯತ್ ಆವರಣದಲ್ಲೇ ನಾಲ್ವರು ಮುಸುಕುದಾರಿಗಳ ತಂಡ ತಲವಾರುಗಳಿಂದ ಧಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಜಲೀಲ್ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version