Home Mangalorean News Kannada News ಮೂಡಬಿದರೆ ಮನೆ ಕಳ್ಳತನ ಆರೋಪಿಯ ಬಂಧನ

ಮೂಡಬಿದರೆ ಮನೆ ಕಳ್ಳತನ ಆರೋಪಿಯ ಬಂಧನ

Spread the love

ಮೂಡಬಿದರೆ ಮನೆ ಕಳ್ಳತನ ಆರೋಪಿಯ ಬಂಧನ

ಮಂಗಳೂರು: ಮೂಡಬಿದರೆ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ಹಗಲು ಹೊತ್ತು ಮನೆಗಳ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಮೂಡಬಿದರೆ ಠಾಣಾ ಪೋಲಿಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಗೋಸ್ತ್ 28 ರಂದು ಮರೂರು ಗ್ರಾಮದ ಸುರೇಶ್ ಭಂಡಾರಿ ಎಂಬವರ ಮನೆಯಿಂದ ಚಿನ್ನಾಭರಣಗಳನ್ನು, ಸಪ್ಟೆಂಬರ್ 25 ರಂದು ಕರಿಂಜೆ ಗ್ರಾಮದ ಸದಾಶಿವ ಆಚಾರ್ಯ ಎಂಬವರ ಮನೆಯಿಂದ ಚಿನ್ನಾಭರಣಗಳನ್ನು, ಪ್ರಾಂತ್ಯ ಗ್ರಾಮದ ವಿಜಯ ಕುಮಾರ್ ಎಂಬ ಮನೆಯಿಂದ ಚಿನ್ನಾಭರಣಗಳನ್ನು, ಬೆಳುವಾಯಿ ಗ್ರಾಮದ ದಿನೇಶ್ ನಾಯ್ಕ್ ಹಾಗೂ ಪುತ್ತಿಗೆ ಗ್ರಾಮದ ಕಿಶೋರ್ ಎಂಬವರ ಮನೆಯಿಂದ ಕಳವು ಮಾಡಿದ ಆರೋಪಿ ಲೋಕೆಸ್ ಶೆಟ್ಟಿಗಾರ್ ಎಂಬಾತನನ್ನು ಮೂಡಬಿದರೆ ಮರಿಯಾಡಿ ಎಂಬಲ್ಲಿ ಬಂಧಿಸಿ ಬಂಧಿತನಿಂದ ಕಳವು ಮಾಡಿದ ಒಟ್ಟು 221 ಗ್ರಾಮ ಬಂಗಾರದ ಆಭರಣ, ಒಂದು ಮೋಟರ್ ಸೈಕಲ್ ಹಾಗೂ ಕಳವು ಮಾಡಿದ 10 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಮೊತ್ತು ರೂ 7 ಲಕ್ಷ ಎಂದು ಅಂದಾಜಿಸಲಾಗಿದೆ.


Spread the love

Exit mobile version