Home Mangalorean News Kannada News ಮೂಡಬಿದರೆ ಶಿಕಾರಿ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರ ಸಾವು; ಒರ್ವನ ಬಂಧನ

ಮೂಡಬಿದರೆ ಶಿಕಾರಿ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರ ಸಾವು; ಒರ್ವನ ಬಂಧನ

Spread the love

ಮೂಡಬಿದರೆ ಶಿಕಾರಿ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರ ಸಾವು; ಒರ್ವನ ಬಂಧನ

ಮೂಡಬಿದರೆ: ವಾರದ ಹಿಂದೆ ಶಿಕಾರಿಗೆಂದು ತೆರಳಿದ ಸ್ನೇಹಿತರಿಬ್ಬರು ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಸ್ಥಳೀಯ ನಿವಾಸಿ ಶೇಖರ್ (23) ಎಂದು ಗುರುತಿಸಲಾಗಿದೆ.

ಮೂಡಬಿದ್ರೆಯ ಗ್ರೇಶನ್ ರೊಡ್ರಿಗಸ್ ಹಾಗೂ ಕೃಷಿಕ ಪ್ರವೀಣ್ ತೌರೊ ಅವರು ಮಾರ್ಚ್ 20ರಂದು ರಾತ್ರಿ ಕರಿಜೆ ಗುತ್ತು ಅರಣ್ಯ ಪ್ರದೇಶಕ್ಕೆ ಶಿಕಾರಿಗೆ ಹೊರಟವರು ನಾಪತ್ತೆಯಾಗಿದ್ದರು. ಮಾರ್ಚ್ 22 ರಂದು ಅವರ ಮೃತದೇಹಗಳು ಪತ್ತೆಯಾಗಿದ್ದು, ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರಬಹುದೇ ಎಂಬ ಸಂಶಯ ಹುಟ್ಟುಹಾಕಿತ್ತು. ಅದಾಗಲೇ ಸ್ಥಳೀಯರಿಬ್ಬರು ನಾಪತ್ತೆಯಾದ ವಿಷಯದ ಬೆನ್ನಟ್ಟಿ ಹೋದ ಪೋಲಿಸರಿಗೆ ಓರ್ವ ಆರೋಪಿ ಸೆರೆ ಸಿಕ್ಕಿದ್ದು, ಕಾಡು ಪ್ರಾಣಿಗಳ ಬೇಟೆಗೆ ವಿದ್ಯುತ್ ತಂತಿ ಅಳವಡಿಸಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ನಾಪತ್ತೆಯಾದ ಇನ್ನೋರ್ವ ಶಂಕಿತ ಆರೋಪಿಯ ಶೋಧ ನಡೆದಿದೆ.


Spread the love

Exit mobile version