Home Mangalorean News Kannada News ಮೂಲ್ಕಿಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಯುವ ಉದ್ಯಮಿಯ ಕೊಲೆ

ಮೂಲ್ಕಿಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಯುವ ಉದ್ಯಮಿಯ ಕೊಲೆ

Spread the love

ಮೂಲ್ಕಿಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಯುವ ಉದ್ಯಮಿಯ ಕೊಲೆ

ಮಂಗಳೂರು: ಹಾಡುಹಗಲೇ ದುಷ್ಕರ್ಮಿಗಳ ತಂಡವೊಂದು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಮೂಲ್ಕಿ ಸಮೀಪದ ವಿಜಯಾ ಬ್ಯಾಂಕ್ ಬಳಿ ಶುಕ್ರವಾರ ಸಂಭವಿಸಿದೆ.

ಮೃತ ಯುವಕನನ್ನು ಕಾರ್ನಾಡು ದರ್ಗಾ ರೋಡ್ ನಿವಾಸಿ ಮುನೀರ್ ಎಂಬವರ ಅಳಿಯ ಮೂಲತಃ ಸುಳ್ಯ ತಾಲೂಕಿನ ಅಬ್ದುಲ್ ಲತೀಫ್ (38) ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಬಂದಿದ್ದರೆನ್ನಲಾದ 5 ಮಂದಿ ದುಷ್ಕರ್ಮಿಗಳು ತಂಡ ಮುನೀರ್, ಅವರ ಮಗ ಮತ್ತು ಅಳಿಯ ವಿಜಯಾಬ್ಯಾಂಕ್ ಬಳಿ ಕಾರಿನಲ್ಲಿ ಬರುತ್ತಿದ್ದ ವೇಳೆ ಮೂವರಿಗೂ ಚೂರಿ ಇರಿದಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮೂವರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಸಿಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅಬ್ದುಲ್ ಲತೀಫ್ ಮೃತಪಟ್ಟರೆಂದು ತಿಳಿದು ಬಂದಿದೆ.

ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ


Spread the love

Exit mobile version