Home Mangalorean News Kannada News ರಾಷ್ಟ್ರಪತಿ ಭೇಟಿ- ಕೃಷ್ಣ ಮಠ, ಪ್ರವಾಸಿ ಮಂದಿರ ಸುತ್ತಮುತ್ತ ಅಂಗಡಿ ಮುಚ್ಚಲು ಸೂಚನೆ

ರಾಷ್ಟ್ರಪತಿ ಭೇಟಿ- ಕೃಷ್ಣ ಮಠ, ಪ್ರವಾಸಿ ಮಂದಿರ ಸುತ್ತಮುತ್ತ ಅಂಗಡಿ ಮುಚ್ಚಲು ಸೂಚನೆ

Spread the love

ರಾಷ್ಟ್ರಪತಿ ಭೇಟಿ- ಕೃಷ್ಣ ಮಠ, ಪ್ರವಾಸಿ ಮಂದಿರ ಸುತ್ತಮುತ್ತ ಅಂಗಡಿ ಮುಚ್ಚಲು ಸೂಚನೆ

ಉಡುಪಿ: ರಾಷ್ಟ್ರಪತಿಯ ಪ್ರಣಬ್ ಮುಖರ್ಜಿಯವರು ಜೂನ್ 18 ರಂದು ಉಡುಪಿ ಜಿಲ್ಲೆಗೆ ಸರ್ಕಾರದ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಲಿದ್ದು, ಶ್ರೀ ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಈ ಸಮಯ ಗಣ್ಯರ ಭದ್ರತೆಯ ದೃಷ್ಟಿಯಿಂದ ಶ್ರೀ ಕೃಷ್ಣ ಮಠದ ಸುತ್ತಮುತ್ತ ಇರುವ ಅಂಗಡಿ, ರಥಬೀದಿಯಲ್ಲಿರುವ ಅಂಗಡಿ, ವಿದ್ಯೋದಯ ಶಾಲೆಯ ಬಳಿ ಇರುವ ಅಂಗಡಿಗಳನ್ನು ಹಾಗೂ ಬನ್ನಂಜೆ ಪ್ರವಾಸಿ ಮಂದಿರದ ಆಸುಪಾಸಿನಲ್ಲಿರುವ ಅಂಗಡಿಗಳನ್ನು ಜೂನ್ 17 ರಂದು ಇಡೀ ದಿನ ಹಾಗೂ ಜೂನ್ 18 ರಂದು ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚಿ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love

Exit mobile version