Home Mangalorean News Kannada News ರೋಟರಿ ಕ್ಲಬ್ ಪೆರ್ಡೂರು ವತಿಯಿಂದ ಸಾಧಕ ಪತ್ರಕರ್ತರಿಗೆ ಸನ್ಮಾನ

ರೋಟರಿ ಕ್ಲಬ್ ಪೆರ್ಡೂರು ವತಿಯಿಂದ ಸಾಧಕ ಪತ್ರಕರ್ತರಿಗೆ ಸನ್ಮಾನ

Spread the love

ರೋಟರಿ ಕ್ಲಬ್ ಪೆರ್ಡೂರು ವತಿಯಿಂದ ಸಾಧಕ ಪತ್ರಕರ್ತರಿಗೆ ಸನ್ಮಾನ

ಉಡುಪಿ: ರೋಟರಿ ಕ್ಲಬ್ ಪೆರ್ಡೂರು, ಹಳೆ ವಿದ್ಯಾರ್ಥಿ ಸಂಘ ಹಾಗೂ ಪೆರ್ಡೂರು ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಶಿಬಿರ ‘ಚಿಗುರು’ ಇದರ ಸಮಾರೋಪ ಸಮಾರಂಭ ಶನಿವಾರ ಜರುಗಿತು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಟಿವಿ 5 ವಾಹಿನಿ ವರದಿಗಾರರಾದ ನಾಗರಾಜ್ ರಾವ್ ಹಾಗೂ ಸುವರ್ಣ ವಾಹಿನಿ ಕ್ಯಾಮಾರಾ ಮ್ಯಾನ್ ಹರೀಶ್ ಇವರುಗಳು ಮಾಧ್ಯಮ ಕ್ಷೇತ್ರದಲ್ಲಿ ನೀಡಿದ ಸೇವೆಗೆ ರೋಟರಿ ವಲಯ 4 ಜಿಲ್ಲೆ 3182 ಜಿಲ್ಲೆಯ ಗವರ್ನರ್ ಬಿ ಎಮ್ ರಮೇಶ್ ಅವರು ಗುರತಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಬಿ ಎಮ್ ರಮೇಶ್ ಅವರು ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಿದೆ. ತಮ್ಮಲ್ಲಿದ್ದ ಪ್ರತಿಭೆಗಳನ್ನು ಸಮಾಜದಲ್ಲಿ ತೋರ್ಪಡಿಸುವುದರ ಮೂಲಕ ದೇಶದ ಸಭ್ಯ ನಾಗರಿಕರಾಗಿ ಬದುಕಬೇಕು ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪೆರ್ಡೂರು ವತಿಯಿಂದ ಅಂಗನವಾಡಿಗಳಿಗೆ ತೂಕ ಮಾಪನ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್, ಡಾ|ಶೇಷಪ್ಪ, ರೋಟರಿ ಕ್ಲಬ್ ಪೆರ್ಡೂರು ಅಧ್ಯಕ್ಷ ಪ್ರಭಾಕರ ಬಂಡಿ, ರೋಟರಿ ಜಿಲ್ಲೆ ಪ್ರಥಮ ಮಹಿಳೆ ಉಷಾ, ಬ್ರಹ್ಮಾವರ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶೋಭಾ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾರುಗಳಾದ ಜಯರಾಮ್, ಸ್ವರ್ಣಲತ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version