Home Mangalorean News Kannada News ರೌಡಿಶೀಟರ್ ಪವನ್ ಕೊಲೆ; ಮೂವರು ಪೋಲಿಸ್ ವಶಕ್ಕೆ

ರೌಡಿಶೀಟರ್ ಪವನ್ ಕೊಲೆ; ಮೂವರು ಪೋಲಿಸ್ ವಶಕ್ಕೆ

Spread the love

ರೌಡಿಶೀಟರ್ ಪವನ್ ಕೊಲೆ; ಮೂವರು ಪೋಲಿಸ್ ವಶಕ್ಕೆ

ಮಂಗಳೂರು: ವಾಮಂಜೂರು ಕುಟ್ಟಿಪಲ್ಕೆ ನಿವಾಸಿ ರೌಡಿ ಶೀಟರ್ ಪವನ್ ರಾಜ್ ಕಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೋಲಿಸರು ಮೂರು ಮಂದಿಯನ್ನು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ವಾಮಾಂಜೂರಿನ ಬಿಪಿನ್ ಜೋಗಿ ಅಲಿಯಾಸ್ ಗಣೇಶ್ ರಾವ್ (29), ಚರಣ್ ಅಲಿಯಾಸ್ ಚರಣ್ ರಾಜ್ ಅಲಿಯಾಸ್ ರಾಜೇಶ್ (22), ಹರೀಶ್ ಪೂಜಾರಿ ಅಲಿಯಾಸ್ ನೋಣಯ್ಯ ಪೂಜಾರಿ (28) ಎಂದು ಗುರುತಿಸಲಾಗಿದೆ.

ಜುಲೈ 24 ರಂದು ಪವನ್ ರಾಜ್ ಅವರನ್ನು ಮಾರಾಕಾಯುಧಗಳಿಂದ ಕಡಿದು ಕೊಲೆಗೈಯ್ಯಲಾಗಿತ್ತು. ಕೊಲೆಯ ಬಳಿಕ ಸ್ಥಳದಲ್ಲಿ ಮಚ್ಚು, ಮೊಬೈಲ್, ಚಪ್ಪಲಿ ಹಾಗೂ ಗೋಡೆಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು.
ಕೊಲೆಗೆ ನಿಖರ ಕಾರಣವೇನೆಂಬುದು ತನಿಖೆಯಿಂದ ಬಯಲಾಗಬೇಕಾಗಿದೆ.


Spread the love

Exit mobile version