Home Mangalorean News Kannada News ಲಂಡನ್ ಹಿಂದೂಜಾ ಮನೆಯಲ್ಲಿ ಶ್ರೀ ಪುತ್ತಿಗೆ ಶ್ರೀಗಳಿಂದ ಪೂಜೆ – ಪ್ರವಚನ

ಲಂಡನ್ ಹಿಂದೂಜಾ ಮನೆಯಲ್ಲಿ ಶ್ರೀ ಪುತ್ತಿಗೆ ಶ್ರೀಗಳಿಂದ ಪೂಜೆ – ಪ್ರವಚನ

Spread the love

ಲಂಡನ್ ಹಿಂದೂಜಾ ಮನೆಯಲ್ಲಿ ಶ್ರೀ ಪುತ್ತಿಗೆ ಶ್ರೀಗಳಿಂದ ಪೂಜೆ – ಪ್ರವಚನ

ಲಂಡನ್ : ಇಂಗ್ಲೆಂಡಿನ ಸರ್ವೋಚ್ಚ ಉದ್ಯಮಿಗಳಾದ ಹಿಂದೂಜಾ ಸಹೋದರರು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ತಮ್ಮ ಮನೆಗೆ ಬರಮಾಡಿಕೊಂಡು ಗೌರವಿಸುವುದರೊಂದಿಗೆ ಆಶೀರ್ವಾದ ಪಡೆದರು .

ಶ್ರೀ ಗೋಪಿಚಂದ್ ಹಿಂದೂಜಾ ಅವರ ನೇತೃತ್ವದಲ್ಲಿ ಸಮಗ್ರ ಹಿಂದೂಜಾ ಕುಟುಂಬವು ಧಾರ್ಮಿಕ ಹಾಗು ಆಧ್ಯಾತ್ಮಿಕ ಸಂವಾದವನ್ನು ಸುಮಾರು ಎರಡು ಘಂಟೆಗಳ ಕಾಲ ನಡೆಸಿದರು. ನಂತರ ಸಂಸ್ಥಾನದ ಪೂಜೆ ನೆರವೇರಿಸಿದ ಶ್ರೀ ಶ್ರೀ ಗಳವರು ಆಶೀರ್ವಚನ ನೀಡುತ್ತಾ ಹಿಂದೂಜ ಕುಟುಂಬದವರು ಸಮಗ್ರ ಹಿಂದೂಗಳ ಹೆಮ್ಮೆಯ ಪ್ರತೀಕವಲ್ಲದೆ ಬ್ರಿಟಿಷರಿಂದ ಆಳಲ್ಪಟ್ಟ ಸಮಗ್ರ ಭಾರತೀಯರ ಸ್ವಾಭಿಮಾನದ ಪ್ರತೀಕ ಎಂದು ಹೇಳಿದರು ವೇದಾಂತ ಸಂವಾದದೊಂದಿಗೆ ಶ್ರೀ ಶ್ರೀ ಗಳವರು ಹಿಂದೂಜಾ ಪ್ರಮುಖರ ಬಳಿ ನಿಮ್ಮ ಯಶಸ್ಸಿನ ಗುಟ್ಟೇನು ಎಂದು ಮರು ಪ್ರಶ್ನೆ ಹಾಕಿದಾಗ ಅವಿಭಕ್ತ ಕುಟುಂಬದ ಸಾಮರಸ್ಯ ಹಾಗೂ ದೇವರ ಮೇಲೆ ಇಟ್ಟ ನಂಬಿಕೆಯೇ ನಮ್ಮ ಉದ್ಯಮದ ಯಶಸ್ಸಿನ ರಹಸ್ಯ ಎಂದರು.

ಶ್ರೀ ಗಳವರು ಉಡುಪಿ ಕೃಷ್ಣನ ಪ್ರತೀಕ ದೊಂದಿಗೆ ಸುಗುಣಾ ಡೈಜೆಸ್ಟ್ ಪತ್ರಿಕೆಯ ಪ್ರತಿಗಳನ್ನು ನೀಡಿದರು ಶ್ರೀ ಗೋಪಿಚಂದ್ ಹಿಂದೂಜಾ ಬರೆದ ” ಬ್ಲೆಸ್ಸಿಂಗ್ಸ್ ” ಹೊತ್ತಗೆಯ ಬಗ್ಗೆ ಸಮೀಕ್ಷಾ ಸಂದೇಶವನ್ನು ನೀಡುವಂತೆ ಅವರು ಶ್ರೀಪಾದರನ್ನು ಕೇಳಿಕೊಂಡರು.


Spread the love

Exit mobile version