Home Mangalorean News Kannada News ವಿಗ್ರಹ ಮಾರಾಟ ಜಾಲದಲ್ಲಿ ಬಂಧಿತನಾದ ದಕ ಜಿಲ್ಲಾ ಎನ್.ಎಸ್.ಯು.ಐ. ಕಾರ್ಯದರ್ಶಿ ಆಸ್ಟಿನ್ ಸಿಕ್ವೇರಾ ಉಚ್ಚಾಟನೆ

ವಿಗ್ರಹ ಮಾರಾಟ ಜಾಲದಲ್ಲಿ ಬಂಧಿತನಾದ ದಕ ಜಿಲ್ಲಾ ಎನ್.ಎಸ್.ಯು.ಐ. ಕಾರ್ಯದರ್ಶಿ ಆಸ್ಟಿನ್ ಸಿಕ್ವೇರಾ ಉಚ್ಚಾಟನೆ

Spread the love

ವಿಗ್ರಹ ಮಾರಾಟ ಜಾಲದಲ್ಲಿ ಬಂಧಿತನಾದ ದಕ ಜಿಲ್ಲಾ ಎನ್ಎಸ್ಯುಐ ಕಾರ್ಯದರ್ಶಿ ಆಸ್ಟಿನ್ ಸಿಕ್ವೇರಾ ಉಚ್ಚಾಟನೆ

ಮಂಗಳೂರು: ಪ್ರಾಚೀನ ವಿಗ್ರಹ ಕಳವು ಮತ್ತು ಮಾರಾಟ ಜಾಲಕ್ಕೆ ಸಂಬಂಧಿಸಿ ಶನಿವಾರ ಕೋಟೇಶ್ವರದಲ್ಲಿ ಬಂಧಿಸಲಾದ ಆರೋಪಿಗಳಲ್ಲಿ ಒಬ್ಬ ದ.ಕ. ಜಿಲ್ಲಾ ಎನ್ಎಸ್ಯು ಐ ಕಾರ್ಯದರ್ಶಿಯಾಗಿದ್ದ ಕುಲಶೇಖರ ನಿವಾಸಿ ಆಸ್ಟಿನ್ ಸಿಕ್ವೇರಾನನ್ನು ದ.ಕ. ಜಿಲ್ಲಾ ಎನ್ಎಸ್ಯು ಐನಿಂದ ಉಚ್ಚಾಟಿಸಿ ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್ಲಾ ಬಿನ್ನು ಆದೇಶ ಹೊರಡಿಸಿದ್ದಾರೆ.

ನಿವಾಸಿ ಆಸ್ಟಿನ್ ಸಿಕ್ವೇರಾ (27) ಎಂಬಾತ ಈ ಆರೋಪಿ. ಶನಿವಾರ ಕೋಟೇಶ್ವರ ಕೋಟಿಲಿಂಗೇಶ್ವರ ದೇವಾಲಯದ ಹಿಂಬದಿ ಆರೋಪಿಗಳು ವಿಗ್ರಹ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ನವಿಲ್ ವಿಲ್ಫಿ ಮಸ್ಕರೇನ್ಹಸ್, ಶಿವಮೊಗ್ಗದ ಅನಿಲ್ ಫುರ್ಟಾಡೊ, ಕುಲಶೇಖರದ ಆಸ್ಟಿನ್ ಸಿಕ್ವೇರಾನನ್ನು ಬಂಧಿಸಲಾಗಿತ್ತು. ಆ ಪೈಕಿ ಆಸ್ಟಿನ್ ಮಂಗಳೂರಿನ ಯುವ ಕಾಂಗ್ರೆಸ್ ಘಟಕದಲ್ಲಿ ಪ್ರಭಾವಿಯಾಗಿದ್ದು ಶಾಸಕ ಜೆ.ಆರ್. ಲೋಬೋ, ಮೊಯ್ದೀನ್ ಬಾವ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಆಪ್ತನಾಗಿದ್ದ. ಇದೇ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ, ಪರಮೇಶ್ವರ್ ಜಿಲ್ಲೆಗೆ ಬಂದಾಗ ಅವರ ಜತೆ ಫೋಟೋ ತೆಗೆಸಿಕೊಳ್ಳುತ್ತಿದ್ದ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟೀಕೆಗೆ ಗುರಿಯಾಗಿದ್ದವು. ಆರೋಪಿಯಿಂದ 40ಸಾವಿರ ರೂ., ಕಾರು ವಶಕ್ಕೆ ಪಡೆಸಲಾಗಿದೆ.

ಸಂಘಟನೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಕಳ್ಳಸಾಗಣೆಯಲ್ಲಿ ತೊಡಗಿರುವ ಆಸ್ಟೀನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದು ಮಾತ್ರವಲ್ಲದೆ ಕಾಂಗ್ರೆಸ್ನ ಹಿರಿಯ ನಾಯಕರ ಜತೆ ಈತ ತೆಗೆಸಿಕೊಂಡ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈತನ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎನ್ಎಸ್ಯುಐ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್ಲಾ ಬಿನ್ನು ಅವರು ಆಸ್ಟಿನ್ ಸಿಕ್ವೇರಾನನ್ನು ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


Spread the love

Exit mobile version