Home Mangalorean News Kannada News ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ಪ್ರತಿಭಟನೆಗೆ ಉಡುಪಿ ಜಿಲ್ಲಾ ಜೆಡಿಎಸ್ ಬೆಂಬಲ

ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ಪ್ರತಿಭಟನೆಗೆ ಉಡುಪಿ ಜಿಲ್ಲಾ ಜೆಡಿಎಸ್ ಬೆಂಬಲ

Spread the love

ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ಪ್ರತಿಭಟನೆಗೆ ಉಡುಪಿ ಜಿಲ್ಲಾ ಜೆಡಿಎಸ್ ಬೆಂಬಲ

ಉಡುಪಿ: ಫೆಬ್ರವರಿ 2ರಂದು ಮುಲ್ಕಿಯಲ್ಲಿ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ನಡೆಯಲಿರುವ ಪ್ರತಿಭಟನೆಗೆ ಉಡುಪಿ ಜಿಲ್ಲಾ ಜನತಾದಳವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೋಗೀಶ್.ವಿ.ಶೆಟ್ಟಿಯವರು ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ವಿಜಯಾ ಬ್ಯಾಂಕನ್ನು ಮತ್ತು ದೇನಾ ಬ್ಯಾಂಕನ್ನು ವಿಲೀನಗೊಳಿಸಿ ಬಳಿಕ ಅದೇ ದಿನ ಗಜೆಟ್ ನೊಟಿಫಿಕೇಶನ್ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಅವೈಜ್ಞಾನಿಕವಾಗಿರುತ್ತದೆ.

ಅವಿಭಜಿತ ದ.ಕ , ಉಡುಪಿ ಜಿಲ್ಲೆ ಬ್ಯಾಂಕ್ ಗಳ ತೊಟ್ಟಿಲು. ವಿಜಯಾ ಬ್ಯಾಂಕ್ ನಂತೆ ಅನೇಕ ಬ್ಯಾಂಕ್ ಗಳು ಇಲ್ಲಿ ಹುಟ್ಟಿ ಬೆಳೆದಿರುತ್ತದೆ. ವಿಜಯಾ ಬ್ಯಾಂಕ್ ಸ್ಥಳೀಯ ರೈತರಿಗೆ , ಮಧ್ಯಮ ವರ್ಗದವರಿಗೆ, ಬಡವರಿಗೆ ಸಹಕಾರಿಯಾಗಿ ಬೆಳೆದಿರುತ್ತದೆ. ದೇಶದ ಕೆಲವೇ ಲಾಭದಾಯಕ ಬ್ಯಾಂಕ್ ಗಳಲ್ಲಿ ಒಂದಾದ ವಿಜಯಾ ಬ್ಯಾಂಕನ್ನು ಗುಜರಾತಿನ ನಷ್ಟದಲ್ಲಿರುವ ಬರೋಡಾ ಬ್ಯಾಂಕ್ ನೊಂದಿಗೆ ವಿಲೀನಕ್ಕೆ ಆದೇಶ ಮಾಡಿರುವಂತದು ದುರದೃಷ್ಟಕರ. ಈ ಆದೇಶವನ್ನು ಕೂಡಲೇ ಹಿಂಪಡೆದು ವಿಜಯ ಬ್ಯಾಂಕ್ ನ ಹೆಸರನ್ನು ಉಳಿಸುವ ಹಾಗೆ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.


Spread the love

Exit mobile version