Home Mangalorean News Kannada News ಶಿರ್ವ: ಪುಂಚಲಕಾಡುವಿನಲ್ಲಿ ಗೆಳೆಯನನ್ನೇ ಕೊಲೆಗೈದು ಸುಡಲು ಯತ್ನಿಸಿದ ಆರೋಪಿ ಪೊಲೀಸ್ ವಶಕ್ಕೆ

ಶಿರ್ವ: ಪುಂಚಲಕಾಡುವಿನಲ್ಲಿ ಗೆಳೆಯನನ್ನೇ ಕೊಲೆಗೈದು ಸುಡಲು ಯತ್ನಿಸಿದ ಆರೋಪಿ ಪೊಲೀಸ್ ವಶಕ್ಕೆ

Spread the love

ಶಿರ್ವ: ಪುಂಚಲಕಾಡುವಿನಲ್ಲಿ ಗೆಳೆಯನನ್ನೇ ಕೊಲೆಗೈದು ಸುಡಲು ಯತ್ನಿಸಿದ ಆರೋಪಿ ಪೊಲೀಸ್ ವಶಕ್ಕೆ

ಶಿರ್ವ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದು ಮನೆ ಮುಂದೆಯೇ ಮೃತ ದೇಹವನ್ನು ಸುಡಲು ಯತ್ನಿಸಿದ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪುಂಚಲಕಾಡು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ಎರ್ಮಾಳು ನಿವಾಸಿ ಹೇಮಂತ್ ಪೂಜಾರಿ (45) ಎಂದು ಗುರುತಿಸಲಾಗಿದ್ದು ಕೊಲೆಗೈದ ಆರೋಪಿಯನ್ನು ಪುಂಚಲಕಾಡು ನಿವಾಸಿ ಆಲ್ಪನ್ ಡಿಸೋಜಾ (50) ಎಂದು ಗುರುತಿಸಲಾಗಿದೆ

ಖಾಸಗಿ ಬಸ್ ಚಾಲಕನಾಗಿರುವ ಆಲ್ಬನ್ ಡಿಸೋಜಾ ಮತ್ತು ಮೃತ ಹೇಮಂತ್ ಪೂಜಾರಿ ದಿನವೂ ಜೊತೆಯಾಗಿ ಮದ್ಯ ಸೇವನೆ ಮಾಡುತ್ತಿದ್ದು ಶುಕ್ರವಾರ ಕೂಡ ಪುಂಚಲಕಾಡುವಿನ ಬಾರ್ ಒಂದರಲ್ಲಿ ಕುಡಿದು ಬಳಿಕ ಇಬ್ಬರೂ ಕೂಡ ಜೊತೆಯಾಗಿ ಆಲ್ಬನ್ ಡಿಸೋಜಾ ಮನೆಗೆ ತೆರಳಿದ್ದರು. ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರಲ್ಲಿ ಜಗಳವಾಗಿದ್ದು ಈ ವೇಳೆ ಆಲ್ಬನ್ ಡಿಸೋಜಾ ಹೇಮಂತ್ ಪೂಜಾರಿಯನ್ನು ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆಯ ಬಳಿಕ ಕುಡಿದ ಅಮಲಿನಲ್ಲಿ ಆರೋಪಿ ಆಲ್ಬನ್ ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದು, ಸ್ಥಳೀಯರು ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಶಿರ್ವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ‘

ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version