ಶೈಕ್ಷಣಿಕ ನೆರವು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಹಾಗೂ ಶಾಲಾ ಕಿಟ್ ವಿತರಣೆ
ಮುಂಬಯಿ : ಬಂಟರ ಸಂಘದಿಂದ ಪಡೆಯುವ ಸಹಾಯದ ಬಗ್ಗೆ ಯಾವುದೇ ಕೀಳರಿಮೆ ಇಲ್ಲದಿರಲಿ. ನಾವು ಬಂಟರಾಗಿ ಬಂಟ ಸಮಾಜದಲ್ಲಿ ಇರುವುದೇ ದೊಡ್ಡ ಗೌರವ. ಬಂಟರ ಸಂಘ ಮುಂಬಯಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ಸಿಗುವ ಸಹಾಯವು ಸಂಘದ ಗೌರವವಾಗಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು.
ಜೂ. 14ರಂದು ಕಾಂದಿವಲಿ ಪೂರ್ವದ ಅವಿನ್ಯು ಹೊಟೇಲಿನ ಸಭಾಂಗಣದಲ್ಲಿ ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಮುಂದಾಳತ್ವದಲ್ಲಿ ನಡೆದ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಶೈಕ್ಷಣಿಕ ನೆರವು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಹಾಗೂ ಶಾಲಾ ಕಿಟ್ ವಿತರಣೆ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರವೀಣ್ ಭೋಜ ಶೆಟ್ಟಿ ಅವರು 98ನೇ ವರ್ಷದಲ್ಲಿರುವ ನಮ್ಮ ಬಂಟರ ಸಂಘ ವಿದ್ಯೆಗೆ ಮಹತ್ವ ನೀಡುತ್ತಾ ಬಂದಿದೆ. ಈ ಸಲ ಸಂಘವು 1.80ಕೋಟಿ ರೂಪಾಯಿಯನ್ನು ಶಿಕ್ಷಣ ಮತ್ತು ಸಮಾಜ ಕಲ್ಯಾಣದ ಮೂಲಕ ವಿತರಿಸುತ್ತಿದ್ದು ಪಡೆಕೊಳ್ಳುವವರು ಇದ್ದಲ್ಲಿ ಕೊಡುವವರ ಅಸ್ತಿತ್ವ ಇದೆ. ಇಂಥಹ ಕಾರ್ಯಕ್ಕೆ ಧನಸಹಾಯ ನೀಡಿ ಸಹಕರಿಸಿದನ್ನು ಎಂದಿಗೂ ಎಂದಿಗೂ ಮರೆಯಬಾರದು. ಹಿರಿಯ ನಾಗರಿಕರನ್ನು ಕೂಡ ಹುಡುಕಿ ಅವರಲ್ಲಿಗೆ ಹೋಗಿ ನಾವು ಅವರನ್ನು ಸತ್ಕರಿಸುವಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ಸಂಘವು ಸಿ.ಎಸ್.ಆರ್. ಸೌಲಭ್ಯವನ್ನು ಪಡೆಯಲು ಅರ್ಹವಾಗಿದ್ದು ಈಗಾಗಲೇ ಸಿ.ಎಸ್.ಆರ್. ಪಂಡ್ ನಮಗೆ ದೊರಕಿದ್ದು ಅದನ್ನು ಹತ್ತು ಕೋಟಿಗೆ ಹೆಚ್ಚಿಸುವ ಯೋಜನೆ ನಮ್ಮದು. ಈ ಮೊತ್ತವು ಸಂಘದ ಸಮಾಜ ಕಲ್ಯಾಣಕ್ಕೆ ಸೀಮಿತವಾಗಲಿ. ಬಂಟರ ಸಂಘ ಎಲ್ಲಾ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಸಂಘದ ಎಲ್ಲಾ ಪ್ರಾದೇಶಿಕ ಸಮಿತಿಗಳು ಬಲಿಷ್ಠವಾಗಿದ್ದು ಸಂಘದ ಎಲ್ಲಾ ಕೆಲಸಗಳು ಸುಸಾಂಗವಾಗಿ ನಡೆಯಲು ಪೂರಕವಾಗಿದೆ ಎಂದರು.
ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ನಾವು ದಾನಿಗಳನ್ನು ಸ್ವತ:
ಸಂಪರ್ಕಿಸಿದ್ದು ಎಲ್ಲರೂ ಅಭಿಮಾನದಿಂದ ನಮಗೆ ಸಹಕರಿಸಿದ್ದಾರೆ. ದಾನಿಗಳ ಸಹಾಯ ಹಾಗೂ ಪ್ರೋತ್ಸಾಹ ಮರೆಯುವಂತಿಲ್ಲ. ಮಕ್ಕಳು ಉತ್ತಮ ಶಿಕ್ಷಣ ಪಡೆದಲ್ಲಿ ಸಂಸಾರದ ಅಭಿವೃದ್ಧಿ. ಶಿಕ್ಷಣವು ಎಲ್ಲರ ಮೂಲಭೂತ ಹಕ್ಕು ಆಗಿದ್ದು ಶಿಕ್ಷಣ ಪಡೆದ ಮಕ್ಕಳಿಂದ ಮುಂದೆ ಸಮಾಜಾಭಿವೃದ್ದಿ ಸಾಧ್ಯ ಎಂದರು.
ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ಅವರು ಸಂಘದ ಸಂಜೀವಿನಿ ಯೋಜನೆ ಬಗ್ಗೆ ಮಾತನಾಡಿ ಸಮಾಜಲ್ಲಿನ ಕಡು ಬಡವರು ಸಂಘದಿಂದ ಸಹಾಯವನ್ನು ಪಡೆದರೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಸ್ಪತ್ರೆಯ ಲಕ್ಷಾಂತರ ಬಿಲ್, ಶಾಲಾ ಕಾಲೇಜುಗಳ ಶುಲ್ಕ ಮಾತ್ರವಲ್ಲದೆ ನಂತರ ಉದ್ಯೋಗ ದೊರೆಯಲು ಅನುಭವ ಇಲ್ಲದ ಕಾರಣ ಮಕ್ಕಳಿಗೆ ಕೂಡಲೇ ಉದ್ಯೋಗ ದೊರೆಯುವುದು ಅಸಾಧ್ಯವಾಗಿದ್ದು ಮಿನಿಸ್ಟ್ರಿ ಆಫ್ ಸ್ಕಿಲ್ ಡೆವಲಪ್ಮೆಂಟ್ ಪ್ರಾರಂಭಿಸಿ ಇದರ ಮೂಲಕ ಮಕ್ಕಳಿಗೆ ತರಬೇತಿಯನ್ನು ನೀಡಿ ಅವರಿಗೆ ಕೆಲಸ ದೊರೆಯಲು ಸುಲಭವಾಗುವಂತೆ ಸರಕಾರ ಮಾಡಿದೆ. ಇದಕ್ಕಾಗಿ ನಾವು ಪ್ರಾಂಭಿಸಿದ ಸಂಜೀವಿನಿ ಯೋಜನೆಯು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಡೆವಲಪ್ಮೆಂಟ್ ಇದರೊಂದಿಗೆ ವಿಲೀನವಾಗಿದ್ದು ನಮ್ಮ ಮಕ್ಕಳು ಇದರ ಪ್ರಯೋಜನ ಪಡೆಯಬೇಕು. ಸಂಘದ ಸಂಜೀವಿನಿ ಯೋಜನೆ ಹಾಗೂ ಮಕ್ಕಳಿಗಾಗಿ ಸ್ಕಿಲ್ ಡೆವಲಪ್ಮೆಂಟ್ ಬಗ್ಗೆ ಮಾಹಿತಿಯಿತ್ತರು.
ಮುಖ್ಯ ಅತಿಥಿಯಾಗಿ ಉದ್ಯಮಿ ಹಾಗೂ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರು ಮಾತನಾಡುತ್ತಾ ನಮ್ಮ ಸಂಘವು ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದು ಅಗತ್ಯವಿದ್ದವರಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಮಕ್ಕಳು ವಿದ್ಯಾವಂತರಾದರೆ ಹೇಗಾದರೂ ಜೀವನ ನಡೆಸಿಯಾರು, ಸರಸ್ವತಿ ಇದ್ದಲ್ಲಿ ಲಕ್ಷಿ ಇರುತ್ತಾಳೆ. ಬಂಟರ ಸಂಘವು 100ನೇ ವರ್ಷ ಆಚರಿಸುವಾಗ ನಮ್ಮ ಸಮಾಜದಲ್ಲಿ ಬಡತನ ನಿರ್ಮೂಲನಗೊಳ್ಳಲಿ, ಸಂಘದ್ದೇ ಆದ ಆಸ್ಪತ್ರೆಯ ಅಗತ್ಯ ಕೂಡ ಇದೆ ಎಂದರು.
ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಖಾಂದೇಶ್ ಭಾಸ್ಕರ ಶೆಟ್ಟಿ ಯವರು ಮಾತನಾಡುತ್ತಾ ಶೈಕ್ಷಣಿಕ ನೆರವು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮವು ಸಂಘದ ಅರ್ಥಪೂರ್ಣ ಹಾಗೂ ದೊಡ್ಡ ಕಾರ್ಯಕ್ರಮವಾಗಿದೆ. ಬೋರಿವಲಿ ಶಿಕ್ಷಣ ಸಂಸ್ಥೆಯು ಮುಂಬಯಿಯಲ್ಲೇ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಯಾಗಿದ್ದು ಆದಷ್ಟು ಬೇಗನೇ ಪೂರ್ಣ ಪ್ರಮಾಣದಲ್ಲಿ ಲೋಕಾರ್ಪಣೆ ಮಾಡಲಿದ್ದೇವೆ. ಇದೇ ರೀತಿ ನಾವು ನೆಮ್ಮದಿ ಕಾಣುವ ಕಾರ್ಯಕ್ರಮ ನಡೆಸೋಣ ಎಂದರು.
ಬಂಟರ ಸಂಘ ಮುಂಬಯಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಮಾತನಾಡುತ್ತಾ ಮಕ್ಕಳು ಸಮಾಜದಿಂದ ಪಡೆದು ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ಹಿಂತಿರುಗಿಸುವಂತಾಗಲಿ. ಮನೆಯ ಒಂದು ಮಗು ಕಲಿತಲ್ಲಿ ಆ ಮನೆ ಕೂಡ ಉದ್ಧಾರವಾಗುವುದು. ವರ್ಷ ಹೋದಂತೆ ಸಮಾಜದಲ್ಲಿ ಅಭಿವೃದ್ಧಿ ಕಂಡುಬರುತ್ತಿದ್ದು ಸಂಘದಿಂದ ಸಹಾಯವನ್ನು ಪಡೆಯುವವರ ಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಆದರೆ ಈ ಸಲ ವಿಧವಾ ವೇತನಕ್ಕೆ 720 ಅರ್ಜಿ ಬಂದಿದ್ದು ಇದು ದುರದೃಷ್ಟಕರ. ಮಕ್ಕಳು ಕಲಿತು ಒಳ್ಳೆಯದಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಬಂಟರ ಸಂಘದ ನಿಧಿಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರಾದ ಮುಂಡಪ್ಪ ಎಸ್. ಪಯ್ಯಡೆಯವರು ಮಾತನಾಡುತ್ತಾ ಬೊರಿವಲಿ ಶಿಕ್ಷಣ ಸಂಸ್ಥೆಯು ಬಂಟರ ಸಂಘಕ್ಕೆ ಒಂದು ಶಕ್ತಿಯಂತಿದೆ. ಈ ಶಿಕ್ಷಣ ಸಂಸ್ಥೆಯ ಬಾಕಿ ಉಳಿದ ಕೆಲಸವನ್ನು ಸಂಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು. ಈ ಸಂಸ್ಥೆಗೆ ನೀಡಿದ ಹಣ ಅದು ಒಳ್ಳೆಯ ಕೆಲಸಕ್ಕೆ ಹೋಗುತ್ತದೆ. ಶಿಕ್ಷಣದಿಂದ ಬಡತನವು ದೂರವಾಗುತ್ತದೆ ಎನ್ನುತ್ತಾ ಮಕ್ಕಳಿಗೆ ಹಿತ ನುಡಿಯನ್ನು ಹೇಳಿದರು.
ಗೌರವ ಅತಿಥಿಯಾಗಿ ಅವಿನ್ಯೂ ಹೊಟೇಲ್ ಮಾಲಕ ರಘುರಾಮ ಶೆಟ್ಟಿಯವರು ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ವಿಲೆ ಪಾರ್ಲೆ ರಾಮಕೃಷ್ಣ ಹೋಟೇಲಿನ ಮಾಲಕ, ಸುಬ್ಬಯ್ಯ ಶೆಟ್ಟಿಯವರಿಗೆ ಹಾಗೂ ಅಹಮದಾಬಾದ್ ವಿಮಾನ ದುರಂತದಲ್ಲಿ ನಿಧನರಾದವರಿಗೆ ಮೌನ ಪ್ರಾರ್ಥನೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು
ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿಯವರು ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ, ಪ್ರಾದೇಶಿಕ ಸಮಿತಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್ ಹೆಗ್ಡೆಯವರಿಗೆ ಶೈಕ್ಷಣಿಕ ನಿಧಿಯನ್ನು ಸಮರ್ಪಿಸಿದರು. 257 ಮಂದಿಗೆ ಸುಮಾರು 17 ಲಕ್ಷ ರೂಪಾಯಿ ಸಹಾಯಧನ ಮತ್ತು 400 ಶಾಲಾ ಪರಿಕರವನ್ನು ವಿತರಿಸಲಾಯಿತು. ಮೂರು ಕುಟುಂಬವನ್ನು ದತ್ತು ಸ್ವೀಕರಿಸಲಾಯಿತು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರ ನೇತೃತ್ವದಲ್ಲಿ ಬೊರಿವಲಿಯ ಪೂರ್ವ ನ್ಯಾನ್ಸಿ ಕಾಲೋನಿಯ ಸಮಾಜದ ಮಹಿಳೆಯೊಬ್ಬರಿಗೆ ಅವರ ಮನೆ ಪುನರ್ ನಿರ್ಮಾಣಕ್ಕಾಗಿ ಪ್ರಾದೇಶಿಕ ಸಮಿತಿಯ ವತಿಯಿಂದ ರೂ. 50,000 ಮೊತ್ತವನ್ನು ನೀಡಿರುವರು.
ದಿ. ಸುಬ್ಬಯ್ಯ ಶೆಟ್ಟಿಯವರ ಸುಪುತ್ರ ಅರುಣ್ ಶೆಟ್ಟಿ ಮತ್ತು ಹಿರಿಯ ನಾಗರಿಕ ಶಂಕರ ಶೆಟ್ಟಿ ಸೀತಾ ಪಾಷ್ಟ ಪೂಡ್ ಬೊರಿವಲಿ ಇವವರನ್ನು ಗೌರವಿಸಲಾಯಿತು. ಹಿರಿಯ ನಾಗರಿಕ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಮತ್ತು ಪ್ರಭಾಕರ್ ಶೆಟ್ಟಿ ಬೋಳ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಯವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಅಲ್ಲದೆ ಸಮಿತಿಯ ಎಲ್ಲಾ ಕಾರ್ಯಗಳಿಗೆ ತನ್ನ ಕಚೇರಿಯಲ್ಲಿ ಅವಕಾಶ ನೀಡುತ್ತಿರುವ ಅಶೋಕ ಶೆಟ್ಟಿ ಎಲ್. ಐ. ಸಿ.ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಸಿ ಎಸ್ ಉತ್ತಮ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಅರ್. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಉಪಸ್ಥಿತರಿದ್ದರು.
ಡಾ. ಪಿ. ವಿ ಶೆಟ್ಟಿ, ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ರೋಹಿತ್ ಶೆಟ್ಟಿ, ಡಾ. ಸತೀಶ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಸಿ. ಎ. ಜಗದೀಶ್ ಶೆಟ್ಟಿ, ಗಂಗಾಧರ ಶೆಟ್ಟಿ, ಭಾಸ್ಕರ ಶೆಟ್ಟಿ, ಅಶೋಕ ಪಕ್ಕಳ,
ಮೊದಲಾದವರು ಉಪಸ್ಥಿತರಿದ್ದರು.
ವಿಶಾಲ್ ಕನೋಜಿಯ ಅವರು ಬಂಟರ ಸಂಘ ರಮಾನಾಥ ಪಯ್ಯಡೆ ಕಾಲೇಜ್ ಆಫ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಸ್ಟಡೀಸ್ ಇದರ ಬಗ್ಗೆ ಮಾತನಾಡಿದರು.
ಮಾಹಿ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿನಿ ತೃಷಾ ಶೆಟ್ಟಿ ತುಳು ಬಾಷೆಯಲ್ಲಿ ಭಾಷಣ ಮಾಡಿ ಎಲ್ಲರ ಮನ ಗೆದ್ದರು.
ಕಾರ್ಯಕ್ರಮಕ್ಕೆ ಸಮಿತಿಯ ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ರವೀಂದ್ರ ಎಸ್. ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ, ಮಹಿಳಾ ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಪ್ರಜ್ವಲ್ ಶೆಟ್ಟಿ, ಕಾರ್ಯದರ್ಶಿ ಸಮೀಕ್ಷಾ ಶೆಟ್ಟಿ, ಕೋಶಾಧಿಕಾರಿ ವಿಭಾ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಧೀರಜ್ ಡಿ. ರೈ, ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಜೆ ಶೆಟ್ಟಿ, ಸಾಂಸ್ಕೃತಿಯ ಸಮಿತಿಯ ಕಾರ್ಯಧ್ಯಕ್ಷೆ ಗೀತಾ ಶೆಟ್ಟಿ, ವಿವಾಹ ಸಮಿತಿಯ ಕಾರ್ಯದರ್ಶಿ ವಿದ್ಯಾ ಆರ್ ಶೆಟ್ಟಿ ಮತ್ತು ಸದಸ್ಯರು, ಸಲಹಾ ಸಮಿತಿಯ ಎಲ್ಲಾ ಸದಸ್ಯರು, ಕಾರ್ಯಾಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಸಹರಿಸಿದರು.
ರಘುನಾಥ್ ಎನ್. ಶೆಟ್ಟಿಯವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಾದೇಶಿಕ ಸಮಿತಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟಿಯವರು ವಂದನಾರ್ಪಣೆಗೈದರು.