Home Mangalorean News Kannada News ಸಿದ್ದರಾಮಯ್ಯ ಕುರಿತು ಸಂಸದ ನಳಿನ್ ಹೇಳಿಕೆ, ಅವರ ನಾಲಗೆ ಮತ್ತು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ –...

ಸಿದ್ದರಾಮಯ್ಯ ಕುರಿತು ಸಂಸದ ನಳಿನ್ ಹೇಳಿಕೆ, ಅವರ ನಾಲಗೆ ಮತ್ತು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ – ವಿಘ್ನೇಶ್ ಕಿಣಿ

Spread the love

ಸಿದ್ದರಾಮಯ್ಯ ಕುರಿತು ಸಂಸದ ನಳಿನ್ ಹೇಳಿಕೆ, ಅವರ ನಾಲಗೆ ಮತ್ತು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ – ವಿಘ್ನೇಶ್ ಕಿಣಿ

ಉಡುಪಿ: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಹೇಳಿರುವ ಹೇಳಿಕೆ ಅವರ ನಾಲಗೆ ಹಾಗೂ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ ಹೇಳಿದ್ದಾರೆ.

ಟಿಪ್ಪು ಜಯಂತಿಯ ವಿರುದ್ದ ಪ್ರತಿಭಟನೆಯ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಟಿಪ್ಪು ಜಯಂತಿ ಮಾಡೋ ಬದಲು ಸಿದ್ದರಾಮಯ್ಯನ ಜಯಂತಿ ಮಾಡಬಹುದಿತ್ತು ಅಂತ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾಧ್ಯಮ ಪ್ರಕಟಣೆ ನೀಡಿರುವ ವಿಘ್ನೇಶ್ ಕಿಣಿ ಅವರು ಟಿಪ್ಪು ಜಯಂತಿ ಬಗ್ಗೆ ಆಕ್ಷೇಪ ಇರೋದು ಬಹುಸಂಖ್ಯಾತರಿಗೆ ಅಲ್ಲ ಕೇವಲ ಬಿಜೆಪಿಯವರಿಗೆ ಮಾತ್ರ ಎಂದು ಸಂಸದರು ಅರಿತುಕೊಳ್ಳಬೇಕಾಗಿದೆ.

ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ , ಆರ್ ಅಶೋಕ್ ಈ ಹಿಂದೆ ಟಿಪ್ಪು ವೇಷವನ್ನು ತೊಟ್ಟು , ಟಿಪ್ಪುವನ್ನು ಇನ್ನಿಲ್ಲದ ಪದಗಳಲ್ಲಿ ಹೊಗಳಿದ ಈ ನಾಯಕರು ಈಗ ಏಕಾಏಕಿ ಉಲ್ಟಾ ಹೊಡೆಯುತ್ತಿರುವುದರ ಹಿಂದಿನ ಕಾರಣವೇನು ಎಂಬುದು ಸ್ಪಷ್ಟಪಡಿಸಲಿ

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಬಯಸುವ ಸಂಸದರು ಎಂಟು ವರ್ಷವಾದರೂ ಪಂಪ್ ವೆಲ್ ಕಾಮಗಾರಿಯನ್ನು ಪೂರ್ಣಗೊಳಿಸಲು ಅಶಕ್ತರಾಗಿರುವುದು ಕ್ಷೇತ್ರದ ಅಭಿವೃದ್ಧಿ ಮೇಲಿನ ವಿಚಾರದಲ್ಲಿ ಸಂಸದರಿಗೆ ಇರುವ ದೂರದೃಷ್ಟಿಯನ್ನು ತೋರಿಸುತ್ತದೆ.

ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನಳೀನ್ ರು 1₹ ರೂಪಾಯಿಗೆ 15 ಡಾಲರ್ ಕೊಡುತ್ತೇವೆ ಎಂದು ಹೇಳಿದ ಕಥೆ ಎಲ್ಲಿವರೆಗೆ ಬಂತು ಎಂದು ಜನರಿಗೆ ತಿಳಿಸಲಿ.

ಸಿದ್ದರಾಮಯ್ಯ ಅವರ ಮೇಲಿನ ಹೇಳಿಕೆ ಒಬ್ಬ ಜವಾಬ್ದಾರಿಯುತ ಸಂಸದರಿಗೆ ಇಂತಹ ಹೇಳಿಕೆ ಶೋಭೆ ತರುವಂಥದ್ದಲ್ಲ ಈ ಕೂಡಲೇ ಸಂಸದರು ಮಾಜಿ ಮುಖ್ಯಮಂತ್ರಿಗಳ ಕ್ಷಮೆಯನ್ನು ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.


Spread the love

Exit mobile version