Home Mangalorean News Kannada News ಸುದರ್ಶನ್ ಕೊಲೆ ಪ್ರಕರಣ: ನಾಲ್ವರ ಬಂಧನ

ಸುದರ್ಶನ್ ಕೊಲೆ ಪ್ರಕರಣ: ನಾಲ್ವರ ಬಂಧನ

Spread the love

ಸುದರ್ಶನ್ ಕೊಲೆ ಪ್ರಕರಣ: ನಾಲ್ವರ ಬಂಧನ

ಮಂಗಳೂರು: ಕಾಸರಗೋಡಿನ ಕುಂಬಳೆ ಸಮೀಪದ ಪುತ್ತಿಗೆ ಪಳ್ಳ ನಿವಾಸಿ ಸುದರ್ಶನ್ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತರನ್ನು ಕೊಲೆಯ ಪ್ರಮುಖ ಆರೋಪಿ ಮೂಲತಃ ಮಂಜೇಶ್ವರದವನಾಗಿದ್ದು ಪ್ರಸ್ತುತ ಉಳ್ಳಾಲ ಕಾಪಿಕಾಡಿನಲ್ಲಿ ವಾಸವಾಗಿರುವ ರಕ್ಷಿತ್ ಡಿ ಕೆ, ತೊಕ್ಕೊಟ್ಟು ಒಳಪೇಟೆಯ ಬೆನ್ನಿ, ಕುಂಬಳೆಯ ರಾಕೇಶ್ ಮತ್ತು ಪುತ್ತೂರು ನಿವಾಸಿ ಶ್ರೀಜಿತ ಎಂದು ಗುರುತಿಸಲಾಗಿದೆ.

ಬಂಧಿತರು ಸುದರ್ಶನ್ ನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಬೆನ್ನಿ ಮತ್ತು ರಕ್ಷಿತ್ ಡಿ ಕೆ ವಿರುದ್ದ ಉಳ್ಳಾಲ ಠಾಣೆಯಲ್ಲಿ ಪ್ರಕರಣಗಳಿದ್ದು, ಮತ್ತಿಬ್ಬರ ವಿರುದ್ದ ಯಾವುದೇ ಪ್ರಕರಣಗಳು ಈ ವೆರೆ ದಾಖಲಾಗಿಲ್ಲ.


Spread the love

Exit mobile version