Home Mangalorean News Kannada News ಸೆ.21-22 :ಮಾಳ- ಕುದುರೆಮುಖ ರಾ.ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಸೆ.21-22 :ಮಾಳ- ಕುದುರೆಮುಖ ರಾ.ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

Spread the love

ಸೆ.21-22 :ಮಾಳ- ಕುದುರೆಮುಖ ರಾ.ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಉಡುಪಿ: ಎರಡು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಕಾರ್ಕಳ ಮಾಳ ಕುದುರೆಮುಖ ರಾಹೆ 169 ಗುಡ್ಡ ಕುಸಿಯುತ್ತಿರುವ ಹಿನ್ನಲೆಯಲ್ಲಿ ಮಾಳ- ಕುದುರೆಮುಖ ರಾ.ಹೆ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಮಾಡಿದ್ದಾರೆ.

ಎರಡು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಕಾರ್ಕಳ ಮಾಳ ಕುದುರೆಮುಖ ರಾಹೆ 169 ಗುಡ್ಡ ಕುಸಿದು , ರಸ್ತೆ ಸಮೀಪ ಇರುವ ಬೃಹತ್ ಗಾತ್ರದ ಮರಗಳು ರಸ್ತೆಗೆ ಬೀಳುತ್ತಿದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ವಾಹನ ಜಖಂ ಆಗಿದ್ದು, ಈಗಾಗಲೇ ಬಿದ್ದಿರುವ ನಾಲ್ಕು ಮರಗಳನ್ನು ತೆರವುಗೊಳಿಸಲಾಗಿದ್ದು, ವಿಪರೀತ ಮಳೆಯಿಂದ ಅಲ್ಲಲ್ಲಿ ಮರಗಳು ಪುನಃ ರಸ್ತೆಗೆ ಬೀಳುತ್ತಿದೆ ತೆರವು ಕಾರ್ಯಾಚರಣೆ ಕೂಡ ಕಷ್ಟಕರವಾಗಿರುತ್ತದೆ ಹಾಗೂ ವಾಹನ ಸಂಚಾರ ಮಾಡಿದ್ದಲ್ಲಿ ಮಾನವ ಪ್ರಾಣಕ್ಕೆ ತೊಂದರೆಯುಂಟಾಗಿದೆ ಸಂಭವ ಕೂಡಾ ಇದ್ದು ಮುಂಜಾಗೃತ ಕ್ರಮವಾಗಿ ಸೆ 21 ಮತ್ತು 22 ರಂದು ಕುದುರೆಮುಖ ರಾಹೆ 169 ನ್ನು ಎರಡು ದಿನಗಳವರೆಗೆ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.


Spread the love

Exit mobile version