Home Mangalorean News Kannada News ಹಿರಿಯಡ್ಕ ಅಕ್ರಮ ಮರಳುಗಾರಿಕೆಗೆ ದಾಳಿ ರೂ. 16 ಲಕ್ಷದ ಸೊತ್ತು ವಶ

ಹಿರಿಯಡ್ಕ ಅಕ್ರಮ ಮರಳುಗಾರಿಕೆಗೆ ದಾಳಿ ರೂ. 16 ಲಕ್ಷದ ಸೊತ್ತು ವಶ

Spread the love

ಹಿರಿಯಡ್ಕ ಅಕ್ರಮ ಮರಳುಗಾರಿಕೆಗೆ ದಾಳಿ ರೂ. 16 ಲಕ್ಷದ ಸೊತ್ತು ವಶ

ಉಡುಪಿ: ಹಿರಿಯಡ್ಕ ಬಳಿಯ ಕುಕ್ಕೆಹಳ್ಳಿ ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ಸೆಪ್ಟೆಂಬರ್ 26 ರಂದು   ಡಾ. ಹೆಚ್.ಎಸ್. ಮಹದೇಶ್ವರ (44), ತಂದೆ: ಸಿದ್ದಯ್ಯ.  ಆಯುಕ್ತರು  ಭೂ ವಿಜ್ಙಾನಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆ, ಉಡುಪಿ. ರಜತಾದ್ರಿ ಮಣಿಪಾಲ, ಉಡುಪಿ ತಾಲೂಕು ಇವರಿಗೆ ದೊರೆತ ಮಾಹಿತಿಯಂತೆ ವಿಶೇಷ ತಹಶೀಲ್ದಾರರು ಬ್ರಹ್ಮಾವರ ಕುಕ್ಕೆಹಳ್ಳಿಯ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು, ಬ್ರಹ್ಮಾವರ , ಗಣಿ ಭೂ ವಿಜ್ಙಾನ ಇಲಾಖೆಯ ಅಧಿಕಾರಿ ಹಾಗೂ  ಪೊಲೀಸ್ ಉಪನಿರೀಕ್ಷಕರವರೊಂದಿಗೆ ಉಡುಪಿ ತಾಲೂಕು ಕುಕ್ಕೆಹಳ್ಳಿ  ಗ್ರಾಮದ ಸರ್ವೆ ನಂ 133  ರ ಮಡಿಸಾಲು ಹೊಳೆಗೆ ಹೊಂದಿಕೊಂಡಿರುವ ಪಟ್ಟಾ ಜಾಗ ಸರ್ವೆ ನಂಬ್ರ 138/8,138/4,125/3 ರಲ್ಲಿ ರುವ ಜಾಗಕ್ಕೆ ದಾಳಿ ಮಾಡಿ ಸ್ಥಳದಲ್ಲಿ ಹಂದಾಡಿ ನಿವಾಸಿ ಪ್ರಜ್ವಲ್ ಶೆಟ್ಟಿ ಎಂಬವರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು ತಂಡ ಧಾಳಿ ನಡೆಸಿದೆ.

ದಾಳಿಯ ವೇಳೆ 5 ಕಬ್ಬಿಣದ ಪೈಪ್ ಗಳು, ಒಂದು ಕಬ್ಬಿಣದ ಜರಡಿ, ಯಾಂತ್ರೀಕೃತ ದೋಣಿ 2, SANY ಹೆಸರಿನ ಹಿಟಾಚಿ-1   ಸೇರಿದಂತೆ ಒಟ್ಟು ರೂಪಾಯಿ 16,06,000/-  ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version